ADVERTISEMENT

ಯುವಕ ಸಾವು; 60 ಮಂದಿಗೆ ಕೋವಿಡ್‌ ದೃಢ

1,127ಕ್ಕೆ ಏರಿಕೆಯಾದ ಸೋಂಕಿತರ ಸಂಖ್ಯೆ, 335 ಪ್ರಕರಣ ಸಕ್ರಿಯ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 15:28 IST
Last Updated 25 ಜುಲೈ 2020, 15:28 IST

ಮಂಡ್ಯ: ಶ್ರೀರಂಗಪಟ್ಟಣದ 24 ವರ್ಷದ ಯುವಕ ಕೋವಿಡ್‌–19ನಿಂದ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ರೋಗದಿಂದ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಯುವಕನನ್ನು ಜುಲೈ 23ರಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆತನಿಗೆ ಕೋವಿಡ್‌– 19 ದೃಢಪಟ್ಟಿತ್ತು. ಆಕ್ಸಿಜನ್‌ ಘಟಕದಲ್ಲಿ ಇರಿಸಲಾಗಿದ್ದ ಆತನನ್ನು ಜುಲೈ 24ರಂದು ವೆಂಟಿಲೇಟರ್‌ನಲ್ಲಿ ಇರಿಸಲಾಗಿತ್ತು. ಶನಿವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಯುವಕನ ಮೃತದೇಹವನ್ನು ಕೋವಿಡ್‌ ಕಾರ್ಯಸೂಚಿಯಂತೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಒಂದೇ ದಿನ 60 ಮಂದಿಗೆ ಸೋಂಕು: ಶನಿವಾರ ಒಂದೇ ದಿನ ಹೊಸದಾಗಿ 60 ಮಂದಿಯಲ್ಲಿ ಕೋವಿಡ್‌ –19 ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,127ಕ್ಕೆ ಏರಿಕೆಯಾಗಿದೆ. ಮಂಡ್ಯ ತಾಲ್ಲೂಕು ಒಂದರಲ್ಲೇ 20 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಕೋವಿಡ್‌ನಿಂದ ಗುಣಮುಖರಾದ 44 ಮಂದಿ ಜಿಲ್ಲಾಸ್ಪತ್ರೆಯಿಂದ ಶನಿವಾರ ಬಿಡುಗಡೆಯಾದರು. 335 ಪ್ರಕರಣಗಳು ಸಕ್ರಿಯವಾಗಿವೆ.

ADVERTISEMENT

ಶನಿವಾರದ ಸೋಂಕಿತರ ವಿವರ

ಮಂಡ್ಯ– 20

ಮಳವಳ್ಳಿ–12
ಶ್ರೀರಂಗಪಟ್ಟಣ– 08

ಮದ್ದೂರು– 09

ಪಾಂಡವಪುರ– 07

ನಾಗಮಂಗಲ– 03

ಕೆ.ಆರ್‌.ಪೇಟೆ– 00

ಅನ್ಯ ಜಿಲ್ಲೆ–01

ಒಟ್ಟು– 60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.