ADVERTISEMENT

ಕೆ.ಆರ್.ಪೇಟೆ | ಬೆಳೆ ವಿಮಾ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 5:43 IST
Last Updated 15 ಜುಲೈ 2025, 5:43 IST

ಕೆ.ಆರ್.ಪೇಟೆ: ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಬೆಳೆಗಳಿಗೆ ಬೆಳೆ ವಿಮಾ ಯೋಜನೆ ಜಾರಿಗೆ ತರಲಾಗಿದೆ.

ಅಲಸಂದೆ ಪ್ರತಿ ಎಕರೆಗೆ ₹243, ಹೆಕ್ಟೇರ್‌ಗೆ ₹600. ಟೊಮೆಟೊಗೆ ಎಕರೆಗೆ ₹1408 ಹಾಗೂ ಹೆಕ್ಟೇರ್‌ಗೆ ₹3,481 ವಿಮೆ ಹಣ ನಿಗದಿ ಪಡಿಸಿದ್ದು, ರೈತರು ಜುಲೈ 15ರೊಳಗೆ ವಿಮೆ ನೊಂದಣಿ ಮಾಡಿಸಬೇಕು.

ಭತ್ತಕ್ಕೆ ಪ್ರತಿ ಎಕರೆಗೆ ₹755 ಹಾಗೂ ಒಂದು ಹೆಕ್ಟೇರ್‌ಗೆ ₹1865. ನೀರಾವರಿ ಪ್ರದೇಶದ ರಾಗಿ ಬೆಳೆಗೆ  ₹302 ಹಾಗೂ ₹746, ಮಳೆ ಆಶ್ರಿತ ರಾಗಿ ಬೆಳೆಗೆ ₹344 ಹಾಗೂ ₹850, ಹುರುಳಿಗೆ ₹166 ಹಾಗೂ ₹410 ವಿಮೆ ಪಾವತಿಸಬೇಕು. ಭತ್ತ, ರಾಗಿ ಮತ್ತು ಹುರಳಿ ಬೆಳೆ ವಿಮೆಗೆ ಆಗಸ್ಟ್ 16 ಕಡೆಯ ದಿನ. ರೈತರು ಮುಂಗಾರು ಹಂಗಾಮಿಗೆ ರೈತರ ಬೆಳೆ ಸಮೀಕ್ಷೆ ಆ್ಯಪ್-2025 ಬಿಡುಗಡೆ ಮಾಡಿದ್ದು, ತಾವೇ ಮೊಬೈಲ್ ಮೂಲಕ ಬೆಳೆಯನ್ನು ಅಪ್‌ಲೋಡ್ ಮಾಡಬಹುದಾಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಜೆ.ಸಂತೋಷ್ ಕುಮಾರ್ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.