ADVERTISEMENT

ನಾಗಮಂಗಲ: ‘ಟೀಕೆ ನಿರ್ಲಕ್ಷಿಸಿ ಮುನ್ನಡೆಯಿರಿ’:ಅಂಬುಜಾಕ್ಷನ್ ನಾಯರ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 6:31 IST
Last Updated 29 ಜನವರಿ 2023, 6:31 IST
ನಾಗಮಂಗಲ ಪಟ್ಟಣದ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಪ್ರಾಂಶುಪಾಲ ಎಚ್.ಎಸ್.ರವೀಂದ್ರ ಉದ್ಘಾಟಿಸಿದರು. ಅಂಬುಜಾಕ್ಷನ್ ನಾಯರ್ ಇದ್ದರು
ನಾಗಮಂಗಲ ಪಟ್ಟಣದ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಪ್ರಾಂಶುಪಾಲ ಎಚ್.ಎಸ್.ರವೀಂದ್ರ ಉದ್ಘಾಟಿಸಿದರು. ಅಂಬುಜಾಕ್ಷನ್ ನಾಯರ್ ಇದ್ದರು   

ನಾಗಮಂಗಲ: ‘ನಾವು ಗುರಿ ಸಾಧಿಸ‌ಲು ಹೊರಟಾಗ ನಮ್ಮನ್ನು ಬೆಂಬಲಿಸಿ ಬೆನ್ನು ತಟ್ಟುವ ಜನರಿಗಿಂತ ಟೀಕಿಸುವ ಜನರೇ ಹೆಚ್ಚಿರುತ್ತಾರೆ. ಟೀಕೆಗಳನ್ನು ನಿರ್ಲಕ್ಷಿಸಿ ಮುನ್ನಡೆದರೆ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದು ಸಾಧ್ಯ ಎಂದು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನ ವಿತರಣಾ ಮುಖ್ಯಸ್ಥ ಅಂಬುಜಾಕ್ಷನ್ ನಾಯರ್ ಹೇಳಿದರು.

ಪಟ್ಟಣದ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ, ಉದ್ಯೋಗ ಮಾಹಿತಿ ಕೋಶ, ಐಕ್ಯುಎಸಿ ವಿಭಾಗ, ಟಿಸಿಎಸ್, ಸಿಎಸ್ಆರ್ ಯೂತ್ ಎಂಪ್ಲಾಯ್‌ಮೆಂಟ್‌ ಘಟಕ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಸಂಸ್ಕೃತಿಯು ನೈಜ ಸಂಸ್ಕೃತಿಯಾಗಿದ್ದು, ಮನಸ್ಸುಗಳ ಮತ್ತು ಸಮಾಜದ ನಡುವೆ, ನಂಬಿಕೆ ನಿರ್ಮಾಣವಾಗಬೇಕು. ಉದ್ಯೋಗ ವನ್ನು ಅರಸಿ ಹೊರಟಾಗ ಜಗತ್ತಿನ ಆಗು ಹೋಗುಗಳ ಬಗ್ಗೆ ತಿಳಿದುಕೊಳ್ಳಬೇಕು. ತಂತ್ರಜ್ಞಾನವನ್ನು ಶೈಕ್ಷಣಿಕವಾಗಿ ಬಳಸಿಕೊಳ್ಳಬೇಕು ಎಂದರು.

ADVERTISEMENT

ಅವಕಾಶಗಳು, ತರಬೇತಿ, ಸಮಾಜ ಸೇವೆ ಲಕುರಿತು ಅವರು ವಿವರಿಸಿದರು.

ಶೃಂಗೇರಿ, ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಹಾಸನದ ಕಾಲೇಜುಗಳ ಪ್ರಾಂಶುಪಾಲರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಮಾತನಾಡಿ, ಜೀವನದಲ್ಲಿ ಗುರಿ ಸಾಧನೆಗೆ ಕೌಶಲ್ಯ ಅಗತ್ಯವಾಗಿದೆ. ಕೌಶಲವೇ ಜೀವನದ ಸಾರತಿಯಾಗಿರುತ್ತದೆ. ಸ್ಪರ್ಧಾತ್ಮಕ ಯುಗಕ್ಕೆ ಯುವ ಪೀಳಿಗೆಯನ್ನು ಸಜ್ಜುಗೊಳಿಸಬೇಕು ಎಂದು ಅವರು ಸಲಹೆ ನೀಡಿದರು.

ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯ ಎಚ್.ಟಿ.ಕೃಷ್ಟೇಗೌಡ, ವಿವೇಕ್ ಜವಲಗಿ, ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಮಾಹಿತಿ ಕೋಶ ವಿಭಾಗದ ಡಾ.ಎಂ.ರವಿಕುಮಾರ್, ಎಂ.ಗುಣವತಿ, ಕೆ.ಬಿ.ಚಂದ್ರಕಲಾ, ಶರತ್ ಬಾಬು, ಎನ್.ಆರ್.ವೇದವತಿ, ಆರ್.ಮೋಹನ್ ಕುಮಾರ್, ಇಂದುಶ್ರೀ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.