ADVERTISEMENT

ಕಳಪೆ ಬೆಲ್ಲ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 16:42 IST
Last Updated 31 ಮಾರ್ಚ್ 2021, 16:42 IST
ಶ್ರೀರಂಗಪಟ್ಟಣ ತಾಲ್ಲೂಕಿನ ವಿವಿಧೆಡೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ‌ ನಡೆಸಿ ವಶಪಡಿಸಿಕೊಂಡಿರುವ ಟಿಪ್ಪರ್, ಟ್ರಾಕ್ಟರ್ ಹಾಗೂ ಕಲ್ಲುಗಳು
ಶ್ರೀರಂಗಪಟ್ಟಣ ತಾಲ್ಲೂಕಿನ ವಿವಿಧೆಡೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ‌ ನಡೆಸಿ ವಶಪಡಿಸಿಕೊಂಡಿರುವ ಟಿಪ್ಪರ್, ಟ್ರಾಕ್ಟರ್ ಹಾಗೂ ಕಲ್ಲುಗಳು   

ಮಂಡ್ಯ: ನಗರದ ಎಪಿಎಂಸಿ ಬೆಲ್ಲದ ಮಾರುಕಟ್ಟೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಅಧಿಕಾರಿಗಳು ಸಂಗ್ರಹಿಸಿದ್ದ ಬೆಲ್ಲದ ಮಾದರಿಯ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ.

ಎಪಿಎಂಸಿಯಲ್ಲಿ ಸಂಗ್ರಹಿಸಲಾಗಿದ್ದ ಒಟ್ಟು ಐದು ಮಾದರಿಯಲ್ಲಿ ಮೂರು ಬೆಲ್ಲದ ಮಾದರಿ ಕಳಪೆ ಎಂಬ ವರದಿ ಬಂದಿದ್ದು ಬೆಲ್ಲ ಮಾರಾಟ ಮಾಡುತ್ತಿದ್ದ ವರ್ತಕರ ವಿರುದ್ಧ ಆಹಾರ ಸುರಕ್ಷತಾ ಕಾಯ್ದೆ ಕಲಂ 51ರ ಅಡಿ ಪ್ರಕರಣ ದಾಖಲು ಮಾಡಲಾಗುವುದು ಎಂದು ಪ್ರಾಧಿಕಾರದ ಅಂಕಿತ ಅಧಿಕಾರಿ ಬೆಟ್ಟಸ್ವಾಮಿ ತಿಳಿಸಿದ್ದಾರೆ.

ಉಳಿದ ಎರಡು ಮಾದರಿಗಳು ರಾಸಾಯನಿಕ ಮಿತಿಯಲ್ಲಿದೆ. ತಾಲ್ಲೂಕಿನ ಪಣಕನಹಳ್ಳಿ ಆಲೆಮನೆಯಲ್ಲಿ ದೊರೆತ ಬೆಲ್ಲದಲ್ಲಿ ರಾಸಾಯನಿಕ ಅಂಶ ಮಿತಿಯಲ್ಲಿದೆ. ಎಪಿಎಂಸಿಯಲ್ಲಿರುವ ಕಂಡುಬಂದಿರುವ ಕಳಪೆ ಬೆಲ್ಲವನ್ನು ಮಾರಾಟ ಮಾಡುವಂತಿಲ್ಲ. ಅಗರ್‌ಬತ್ತಿ ಹಾಗೂ ಇನ್ನಿತರ ಉತ್ಪನ್ನ ತಯಾರಿಕೆಗೆ ಬಳಸಬೇಕು ಎಂದು ಸೂಚಿಸಲಾಗಿದೆ. ಜಪ್ತಿ ಮಾಡಿದ್ದ ಬೆಲ್ಲವನ್ನು ತೆರವುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.