ADVERTISEMENT

ತೋಟದ ಮನೆಗೆ ನುಗ್ಗಿ ಮೇಕೆ ಮತ್ತು ಮಾಲೀಕನ ಮೇಲೆ ದಾಳಿ ನಡೆಸಿದ್ದ ಚಿರತೆ ಸರೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2023, 10:57 IST
Last Updated 9 ಫೆಬ್ರುವರಿ 2023, 10:57 IST
ತೋಟದ ಮನೆಗೆ ನುಗ್ಗಿ ಮೇಕೆ ಮತ್ತು ಮಾಲೀಕನ ಮೇಲೆ ದಾಳಿ ನಡೆಸಿದ್ದ ಚಿರತೆ ಸರೆ
ತೋಟದ ಮನೆಗೆ ನುಗ್ಗಿ ಮೇಕೆ ಮತ್ತು ಮಾಲೀಕನ ಮೇಲೆ ದಾಳಿ ನಡೆಸಿದ್ದ ಚಿರತೆ ಸರೆ   

ಮಂಡ್ಯ: ಕೆ.ಆರ್.ಪೇಟೆ ತಾಲ್ಲೂಕು ಮೂಡನಹಳ್ಳಿ ಗ್ರಾಮದ ತೋಟದ ಮನೆಗೆ ನುಗ್ಗಿದ್ದ ಚಿರತೆ ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುರುವಾರ ಯಶಸ್ವಿಯಾಗಿದ್ದಾರೆ.

ಗ್ರಾಮದ ನಿಂಗೇಗೌಡರ ತೋಟದ ಮನೆಗೆ ಬುಧವಾರ ತಡ ರಾತ್ರಿ ಚಿರತೆ ನುಗ್ಗಿತ್ತು. ಈ ವೇಳೆ ನಿಂಗೇಗೌಡ ಹಾಗೂ ಪತ್ನಿ ಮನೆಯಲ್ಲೇ ಮಲಗಿದ್ದರು. ಕೊಟ್ಟಿಗೆಯಲ್ಲಿದ್ದ ಮೇಕೆಗಳ ಮೇಲೆ ದಾಳಿ ನಡೆಸಿದಾಗ ನಿಂಗೇಗೌಡ ಹಾಗೂ ಪತ್ನಿ ಉಪಾಯದಿಂದ ಹೊರ ಬರಲು ಯತ್ನಿಸಿದ್ದರು, ಈ ವೇಳೆ ಚಿರತೆ ಅವರ ಮೇಲೂ ದಾಳಿ ಮಾಡಿತ್ತು. ಅದರೂ ಅವರು ಹೊರಗೆ ಓಡಿ ಬರುವಲ್ಲಿ ಯಶಸ್ವಿಯಾಗಿದ್ದರು.

ಹೊರಗೆ ಬಂದ ತಕ್ಷಣ ನಿಂಗೇಗೌಡರು ಮನೆಯ ಚಿಲಕ ಹಾಕಿ ಚಿರತೆಯನ್ನು ಕೂಡಿ ಹಾಕಿದ್ದರು. ಘಟನೆಯಲ್ಲಿ ನಿಂಗೇಗೌಡರ ಬೆನ್ನು, ಸೊಂಟಕ್ಕೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪತ್ನಿಗೂ ತರಚಿದ ಗಾಯಗಳಾಗಿವೆ.

ADVERTISEMENT

ಮನೆಯೊಳಗಿದ್ದ 6 ಮೇಕೆಯಲ್ಲಿ ಒಂದನ್ನು ಚಿರತೆ ಕೊಂದು ಹಾಕಿದೆ. ಗುರುವಾರ ಮುಂಜಾನೆ ಮನೆ ಸುತ್ತಲೂ ಜನ ಸೇರಿಕೊಳ್ಳುತ್ತಿದ್ದಂತೆ ಬಂಧಿಯಾಗಿದ್ದ ಚಿರತೆ ಭಯದಿಂದ ಅಡಗಿ ಕುಳಿತಿತ್ತು.

ಗ್ರಾಮಸ್ಥರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಬರುವ ಲಸಿಕೆ ಹಾರಿಸಿ ಚಿರತೆ ಸೆರೆ ಹಿಡಿದರು.

ಚಿರತೆ ಅಡಗಿ ಕುಳಿತಿದ್ದ, ಅರಣ್ಯ ಇಲಾಖೆ ಸೆರೆಹಿಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.