ADVERTISEMENT

ಮಂಡ್ಯ: ಉಳುಮೆ ಮಾಡುವಾಗ ಹೃದಯಾಘಾತ- ರೈತ ಸಾವು

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2025, 4:12 IST
Last Updated 23 ಅಕ್ಟೋಬರ್ 2025, 4:12 IST
<div class="paragraphs"><p>ಶಿವಣ್ಣಗೌಡ</p></div>

ಶಿವಣ್ಣಗೌಡ

   

ಮಂಡ್ಯ: ತಾಲ್ಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ಹೊಲದಲ್ಲಿ ಉಳುಮೆ ಮಾಡುವಾಗ ರೈತ ಶಿವಣ್ಣಗೌಡ(55) ಬುಧವಾರ ಮೃತಪಟ್ಟಿದ್ದಾರೆ.

ರೇಷ್ಮೆ ಬೆಳೆಯನ್ನು ಅವಲಂಬಿಸಿ ರೈತ ಶಿವಣ್ಣಗೌಡ ಜೀವನ ನಡೆಸುತ್ತಿದ್ದರು. ಕುಟುಂಬಕ್ಕೆ ಆಸರೆಯಾಗಿದ್ದ ರೈತನ ಸಾವಿನಿಂದ ಪತ್ನಿ ,ಇಬ್ಬರು ಚಿಕ್ಕ ಮಕ್ಕಳು ಕಂಗಾಲಾಗಿದ್ದಾರೆ.

ADVERTISEMENT

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆರಗೋಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.