ಕಿಕ್ಕೇರಿ: ಪಟ್ಟಣದ ಅಮಾನಿಕೆರೆಯ ಕೆಸರಿನಲ್ಲಿ ಸಿಲುಕಿ ವೃದ್ಧೆಯೊಬ್ಬರು ಮಂಗಳವಾರ ಸಾವನ್ನಪ್ಪಿದ್ದಾರೆ.
ಹೋಬಳಿಯ ಸಾಸಲು ಗ್ರಾಮದ ಲೇ. ನಂಜಯ್ಯನವರ ಪತ್ನಿ ನಂಜಮ್ಮ (75) ಮೃಪಟ್ಟವರು. ಇವರು ಕಿಕ್ಕೇರಿಯಲ್ಲಿರುವ ಮೊಮ್ಮಗಳ ಮನೆಗೆ ಬಂದಿದ್ದರು. ಬಹಿರ್ದೆಸೆಗೆಂದು ಅಮಾನಿಕೆರೆ ಬಳಿ ಹೋಗಿದ್ದಾಗ ಕಾಲು ಜಾರಿ ಕೆಸರಿನಲ್ಲಿ ಬಿದ್ದು ಮೇಲೆ ಬರಲಾಗದೆ ಸಾವನ್ನಪ್ಪಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.