
ಪ್ರಜಾವಾಣಿ ವಾರ್ತೆ
ಮಂಡ್ಯ: ಮಂಥನ ಮಂಡ್ಯ ವೈಚಾರಿಕಾ ವೇದಿಕೆ ವತಿಯಿಂದ ಮಾ.7 ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಕಮಲ ಮಂದಿರದಲ್ಲಿ ‘ಆರ್ಎಸ್ಎಸ್–100’ ಸಂವಾದ ಕಾರ್ಯಕ್ರಮ ನಡೆಯಲಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಮತ್ತು ದಕ್ಷಿಣ ಪ್ರಚಾರ ಪ್ರಮುಖ್ ಅರುಣ್ ಕುಮಾರ್ ಅವರು ಸಂವಾದ ನಡೆಸಿಕೊಡಲಿದ್ದು, ಚಿಂತಕರು ಹಾಗೂ ಪತ್ರಕರ್ತರು ಭಾಗವಹಿಸುತ್ತಾರೆ ಎಂದು ಚಿಂತಕ ಹೊಸಹಳ್ಳಿ ಸುಧಾಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
.........
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.