ADVERTISEMENT

ಸುನೀತಾ ಪುಟ್ಟಣ್ಣಯ್ಯ ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2023, 12:49 IST
Last Updated 13 ಏಪ್ರಿಲ್ 2023, 12:49 IST
ಸುನೀತಾ ಪುಟ್ಟಣ್ಣಯ್ಯ
ಸುನೀತಾ ಪುಟ್ಟಣ್ಣಯ್ಯ   

ಪಾಂಡವಪುರ (ಮೇಲುಕೋಟೆ): ವಿಧಾನಸಭಾ ಚುನಾವಣೆಗೆ ಮೇಲುಕೋಟೆ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ಪಿ.ವಿ.ಸುಂದ್ರಮ್ಮ (ಸುನೀತಾ ಪುಟ್ಟಣ್ಣಯ್ಯ) ಗುರುವಾರ ನಾಮಪತ್ರ ಸಲ್ಲಿಸಿದರು.

‘ಮೊದಲ ದಿನವಾದ್ದರಿಂದ ನಾನು ನಾಮಪತ್ರ ಸಲ್ಲಿಸಿದ್ದೇನೆ, ನಂತರ ವಾಪಸ್‌ ಪಡೆಯುತ್ತೇನೆ. ಅಧಿಕೃತವಾಗಿ ಬಿ.ಫಾರಂ ಜೊತೆ ಕರ್ನಾಟಕ ಸರ್ವೋದಯ ಪಕ್ಷದ ಅಭ್ಯರ್ಥಿಯಾಗಿ ನನ್ನ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಏ.15 ಹಾಗೂ ಏ.20ರಂದು 2 ನಾಮಪತ್ರ ಸಲ್ಲಿಸಲಿದ್ದಾನೆ’ ಎಂದರು.

ಸರ್ವೋದಯ ಕರ್ನಾಟಕ ಪಕ್ಷವು ದರ್ಶನ್‌ ಪುಟ್ಟಣ್ಣಯ್ಯ ಅವರ ಹೆಸರು ಘೋಷಣೆ ಮಾಡಿದೆ. ಕಾಂಗ್ರೆಸ್‌ ಪಕ್ಷ ಇಲ್ಲಿ ಅಭ್ಯರ್ಥಿ ಹಾಕದೇ ದರ್ಶನ್‌ ಅವರಿಗೆ ಬೆಂಬಲ ಘೋಷಣೆ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.