ADVERTISEMENT

ಅಂಗನವಾಡಿ ಕೇಂದ್ರಕ್ಕೆ ಸಿಡಿಪಿಓ ಭೇಟಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2011, 9:40 IST
Last Updated 10 ಸೆಪ್ಟೆಂಬರ್ 2011, 9:40 IST

ಸರಗೂರು: ಪಟ್ಟಣದ 10ನೇ ವಾರ್ಡಿನ ಅಂಗನವಾಡಿ ಕೇಂದ್ರ-1ರಲ್ಲಿ ಶಿಥಿಲ ವಾಗಿರುವ ಅಂಗನವಾಡಿ ಕೇಂದ್ರಕ್ಕೆ ಗುರುವಾರ ತಾಲ್ಲೂಕು ಶಿಶು ಅಭಿವೃದ್ಥಿ ಯೋಜನಾಧಿಕಾರಿ ರಾಮಕೃಷ್ಣಪ್ಪ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿ ಆರ್‌ಐಡಿಎಫ್ ಯೋಜನೆಯಲ್ಲಿ ನೂತನವಾಗಿ ಅಂಗನ ವಾಡಿ ಕಟ್ಟಡ ನಿರ್ಮಾಣ ಮಾಡಲು ರೂ.4ಲಕ್ಷ ಬರುತ್ತಿದ್ದು, ಅಂಗನವಾಡಿ ನಿವೇಶನದ ದಾಖಲಾತಿಯನ್ನು ಇಲಾಖೆಗೆ ನೀಡಿದರೆ ಹಣವು ಬಿಡುಗಡೆ ಆಗುತ್ತದೆ ಎಂದು ಹೇಳಿದರು.

ಸೆ.4ರಂದು `ಪ್ರಜಾವಾಣಿ~ ಯಲ್ಲಿ  `ಅಂಗನವಾಡಿ ಕಟ್ಟಡ ಶಿಥಿಲ~ ವರದಿ ಪ್ರಕಟವಾಗಿತ್ತು. ಮುಳ್ಳೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಎಚ್.ಆರ್. ಭಾಗ್ಯಲಕ್ಷ್ಮಿ, ತಾ.ಪಂ. ಅಧ್ಯಕ್ಷ ಗೋಪಾಲ ಸ್ವಾಮಿ, ಪ.ಪಂ. ಉಪಾಧ್ಯಕ್ಷ ನಾಗ ರಾಜರಾಮ, ಅಂಗನವಾಡಿ ಕಾರ್ಯಕರ್ತೆ ವಿಜಯ ಲಕ್ಷ್ಮಿ, ತೊಗಟವೀರ ಸಮಾಜದ ಅಧ್ಯಕ್ಷ ಸಿ.ನಾಗರಾಜು, ಕಾರ್ಯದರ್ಶಿ ಸಿ. ರಂಗಧಾಮ, ಎಸ್.ಕೆ.ಮುಕುಂದ ರಾಜು, ಜಿ.ರಘುರಾಮ, ಎಸ್.ವಿ.ಗೋಪಾಲ ಕೃಷ್ಣ, ನಾಗರಾಜು, ಎಸ್.ಎನ್, ರಾಜಣ್ಣ, ಸಿ.ರಾಧಾಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.