ADVERTISEMENT

ಕೆರೆಗೆ ಉರುಳಿದ ಕಾರು: ದಂಪತಿ ಪಾರು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 9:49 IST
Last Updated 26 ಸೆಪ್ಟೆಂಬರ್ 2013, 9:49 IST

ಮೈಸೂರು; ಇಲ್ಲಿಯ ನಂಜನಗೂಡು ರಸ್ತೆಯಲ್ಲಿರುವ ಮಂಟಕಳ್ಳಿ ಕೆರಗೆ ಕಾರೊಂದು ಉರುಳಿ ಅದರಲ್ಲಿದ್ದ ದಂಪತಿ ಈಜಿ ಸುರಕ್ಷಿತವಾಗಿ ದಡ ಸೆರಿದ ಘಟನೆ ಗುರುವಾರ ಮಧ್ಯಾಹ್ನ 12ಕ್ಕೆ ಸಂಭವಿಸಿದೆ.

ಕುವೆಂಪುನಗರದ ನಿವಾಸಿ ವಿಜಯ್‌ ಮತ್ತು ಅವರ ಪತ್ನಿ ಅವಘಡದಲ್ಲಿ ಪಾರಾಗಿ ಬಂದವರು. ವಿಜಯ್ ಅಮೆರಿಕದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸಕ್ಕಿದ್ದು, 15 ದಿನಗಳ ಹಿಂದೆ ಮೈಸೂರಿಗೆ ಬಂದಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಕಾರನ್ನು ಕ್ರೇನ್ ಮೂಲಕ ಮೇಲೆತ್ತಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.