ADVERTISEMENT

ದೈಹಿಕ ನ್ಯೂನತೆ ಕೇವಲ ಸಾಂಕೇತಿಕ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 7:17 IST
Last Updated 29 ಮಾರ್ಚ್ 2018, 7:17 IST
ಮೈಸೂರಿನಲ್ಲಿ ನಡೆದ ಶ್ರವಣದೋಷವುಳ್ಳವರ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ವಿಜೇತರಾದ ಜೆಎಸ್ಎಸ್ ಅಂಗವಿಕಲರ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಟ್ರೋಫಿ ನೀಡಲಾಯಿತು. ನಂಜುಂಡಸ್ವಾಮಿ, ಡಿ.ವಿ.ನಂದಿನಿ, ಎಚ್.ಎನ್.ಮಹದೇವಸ್ವಾಮಿ ಇದ್ದಾರೆ
ಮೈಸೂರಿನಲ್ಲಿ ನಡೆದ ಶ್ರವಣದೋಷವುಳ್ಳವರ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿಯಲ್ಲಿ ವಿಜೇತರಾದ ಜೆಎಸ್ಎಸ್ ಅಂಗವಿಕಲರ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಟ್ರೋಫಿ ನೀಡಲಾಯಿತು. ನಂಜುಂಡಸ್ವಾಮಿ, ಡಿ.ವಿ.ನಂದಿನಿ, ಎಚ್.ಎನ್.ಮಹದೇವಸ್ವಾಮಿ ಇದ್ದಾರೆ   

ಮೈಸೂರು: ದೈಹಿಕ ನ್ಯೂನತೆ ಎಂಬುದು ಕೇವಲ ಸಾಂಕೇತಿಕವಾಗಿದ್ದು, ಇದರಿಂದ ಮಾನಸಿಕ ಶಕ್ತಿಯನ್ನು ಕುಂದಿಸಲು ಸಾಧ್ಯವಿಲ್ಲ ಎಂದು ಮೈಸೂರು ವಿ.ವಿ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಎಂ.ಚಂದ್ರಕುಮಾರ್ ಹೇಳಿದರು.

ಜೆಎಸ್ಎಸ್ ಅಂಗವಿಕಲರ ಪಾಲಿಟೆಕ್ನಿಕ್ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಈಚೆಗೆ ನಡೆದ ಶ್ರವಣದೋಷವುಳ್ಳವರ ರಾಜ್ಯಮಟ್ಟದ ವಾಲಿಬಾಲ್ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.

ಅನೇಕರು ದೈಹಿಕ ನ್ಯೂನತೆ ಮರೆತು ರಾಷ್ಟ್ರ–ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮಾರಿಯಪ್ಪನ್, ಜಾವಿಂದರ್‌ ಇದಕ್ಕೆ ಉದಾಹರಣೆ ಎಂದರು.

ADVERTISEMENT

ಪ್ರಾಂಶುಪಾಲ ನಂಜುಂಡಸ್ವಾಮಿ, ಮಧುಸೂದನ್, ಪಳನಿಸ್ವಾಮಿ, ಸಂಘದ ಉಪಾಧ್ಯಕ್ಷ ಎಸ್.ಶಿವಶಂಕರ್, ಕಾರ್ಯದರ್ಶಿ ಜಿ.ಪಿ.ಸತೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.