ADVERTISEMENT

ವರುಣಾದಲ್ಲಿ ವಿಜೇಯಂದ್ರ ಮತಯಾಚನೆ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 13:02 IST
Last Updated 13 ಏಪ್ರಿಲ್ 2018, 13:02 IST

ವರುಣಾ: ಬಿಜೆಪಿ ಸಂಭಾವ್ಯ ಅಭ್ಯರ್ಥಿ ಬಿ.ವೈ.ವಿಜೇಯಂದ್ರ ಅವರು ಗುರುವಾರ ವರುಣಾ ಕ್ಷೇತ್ರದ ತೋರನಹಳ್ಳಿ ಹೊಮ್ಮಮಳೆ, ಕಾರಮೊಳೆ ತೊರನಹಳ್ಳಿ, ಹೊಮ್ಮೆ, ಚಿಕ್ಕಹೊಮ್ಮೆ  ಗ್ರಾಮಗಳಲ್ಲಿ ಮನೆ ಮನೆ ತೆರಳಿ  ಮತಯಾಚನೆ ಮಾಡಿದರು.

ತೊರನಹಳ್ಳಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು. ಹೊಮ್ಮೆ ಗ್ರಾಮದಲ್ಲಿ ಮನೆಯೊಂದರ ಜಗಲಿ ಕಟ್ಟೆಯ ಮೇಲೆ ಕುಳಿತು ಗ್ರಾಮದ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು. ಚಿಕ್ಕಿಹೊಮ್ಮ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ದಾಸನೂರು ಗ್ರಾಮದಲ್ಲಿ ಬಸವ ಬಳಗದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಇದಕ್ಕೂ ಮೊದಲು ಆಲನಹಳ್ಳಿಯಲ್ಲಿ ಕುದೇರು ಮಠದ ಶಾಂತ ಸ್ವಾಮೀಜಿಯನ್ನು ಭೇಟಿಯಾಗಿ ಆರ್ಶೀವಾದ ಪಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.