ADVERTISEMENT

‘ವಿಜಯಶಂಕರ್ ಬಿಜೆಪಿ ತೊರೆಯಲು ನಾನು ಕಾರಣನಲ್ಲ’

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 8:40 IST
Last Updated 30 ಅಕ್ಟೋಬರ್ 2017, 8:40 IST

ಪಿರಿಯಾಪಟ್ಟಣ: ಬಿಜೆಪಿ ತೊರೆದ ಸಿ.ಎಚ್‌.ವಿಜಯಶಂಕರ್‌ ಪಕ್ಷ ಬಿಡಲು ನೆಪವಾಗಿ ವಿನಾ ಕಾರಣ ನನ್ನ ಮೇಲೆ ಆರೋಪ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಎಸ್.ಮಂಜುನಾಥ್ ತಿಳಿಸಿದರು.

ಪಟ್ಟಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಾಲ್ಲೂಕಿನಲ್ಲಿ ಪಕ್ಷದ ಮತ್ತೊಂದು ಕಚೇರಿ ಸ್ಥಾಪಿಸಿ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ವಿಜಯಶಂಕರ್‌ ಆರೋಪಿಸಿದ್ದರು.

ಆದರೆ, ನನ್ನ ಅಭಿಮಾನಿ ಬಳಗದ ಸ್ವಂತ ಕಚೇರಿ ಹೊಂದಿ ಅಲ್ಲಿ ಪ್ರಧಾನಿ ಮೋದಿ ಭಾವಚಿತ್ರ ಹಾಕಲಾಗಿತ್ತು ಎಂದು ಹೇಳಿದರು. ಬಿಜೆಪಿ ಬಲವರ್ಧನೆಗೆ ವರಿಷ್ಠರು ಸೂಚಿಸಿರುವ ಮೇರೆಗೆ ತಾಲ್ಲೂಕಿನಾದ್ಯಂತ ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತಿದ್ದೇನೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.