ADVERTISEMENT

ಭಾರತೀಯರಿಗೆ ರಕ್ಷಣೆ ನೀಡಿ: ಅಮೆರಿಕಾದಲ್ಲಿ ಗುಂಡಿಗೆ ಬಲಿಯಾದ ಅಭಿಷೇಕ್‌ ತಂದೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 7:15 IST
Last Updated 30 ನವೆಂಬರ್ 2019, 7:15 IST
   

ಮೈಸೂರು: ನನ್ನ ಮಗನಿಗೆ ಆದ ಸ್ಥಿತಿ ಮತ್ತಾರಿಗೂ ಆಗಬಾರದು. ಇಲ್ಲಿಂದ ಸಾಲ ಮಾಡಿ ಮಕ್ಕಳನ್ನು ವಿದೇಶಕ್ಕೆ ಕಳುಹಿಸುತ್ತೇವೆ. ಅವರ ರಕ್ಷಣೆ ಕುರಿತು ಸರ್ಕಾರ ಗಮನಹರಿಸಬೇಕು ಎಂದು ಅಮೆರಿಕದಲ್ಲಿ ಗುಂಡಿನ ದಾಳಿಯಿಂದ ಮೃತಪಟ್ಟ ಅಭಿಷೇಕ್ಅವರ ತಂದೆ ಸುದೇಶ್ ಚಂದ್ ಆಗ್ರಹಿಸಿದರು.

ದೇಹದ ಮರಣೋತ್ತರ ಪರೀಕ್ಷೆ ನಡೆಯುವುದಕ್ಕೆ ಇನ್ನೂ 8 ದಿನಗಳು ಆಗಲಿವೆ. ಗುಂಡಿನ ದಾಳಿ ಏಕಾಯಿತು, ಯಾರು ಮಾಡಿದರು ಎಂಬುದರ ಕುರಿತು ತನಿಖೆ ನಡೆಯುತ್ತಿದೆಎಂದು ಪೊಲೀಸರು ತಿಳಿಸಿದ್ದಾರೆಎಂದು ಅವರು ಹೇಳಿದರು.

ಇದೇ ವೇಳೆ ಆರೋಗ್ಯ ಸಚಿವ ಶ್ರೀರಾಮುಲು ಅಭಿಷೇಕ್‌ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.

ADVERTISEMENT

ಅಭಿಷೇಕ್‌ ‌ಮೃತದೇಹವನ್ನು ಇಲ್ಲಿಗೆ ಕಳುಹಿಲಾಗುವುದಿಲ್ಲ. ಹಾಗಾಗಿ, ಕುಟುಂಬದ ಸದಸ್ಯರು ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.