ಮೈಸೂರು: ಅಮೆರಿಕದಲ್ಲಿ ಗುಂಡಿನ ದಾಳಿಯಿಂದ ಮೃತಪಟ್ಟ ಅಭಿಷೇಕ್ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ ಎಂದು ಇವರ ಸಂಬಂಧಿ ಶ್ರೀವತ್ಸ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ವೀಸಾ ಸಮಸ್ಯೆ ಬಗೆಹರಿದಿದ್ದು, ಗುರುವಾರ ನಸುಕಿನ 1.20ರ ವಿಮಾನದಲ್ಲಿ ಅಭಿಷೇಕ್ ತಂದೆ, ತಾಯಿ ಸೇರಿದಂತೆ ಒಟ್ಟು ಐವರು ಸ್ಯಾನ್ ಬರ್ನಾರ್ಡಿನೊಗೆ ತೆರಳಲಿದ್ದಾರೆ. ಅವರು ಹೋಗುವ ಸಮಯಕ್ಕೆ ಮರಣೋತ್ತರ ಪರೀಕ್ಷೆ ಮುಗಿದು ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಅಣಿಗೊಳಿಸಲಾಗಿರುತ್ತದೆ. ನಂತರ, ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರು ಹೇಳಿದರು.
ಅಭಿಷೇಕ್ ಕುಟುಂಬದವರ ಸಹಾಯಾರ್ಥ ಇವರು ಆರಂಭಿಸಿದ್ದ ಆನ್ಲೈನ್ ದೇಣಿಗೆ ಸಂಗ್ರಹ ಮುಗಿದಿದೆ. ಒಟ್ಟು ₹ 50 ಲಕ್ಷ ಹಣ ಸಂಗ್ರಹವಾಗಿದೆ. 1,800 ಮಂದಿ ಉದಾರವಾಗಿ ಇವರಿಗೆ ಧನಸಹಾಯ ಮಾಡಿದ್ದಾರೆ. ಸಾವಿರಾರು ಮಂದಿ ಅಭಿಷೇಕ್ ಸಾವಿಗೆ ಕಂಬನಿ ಮಿಡಿದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.