ADVERTISEMENT

ಮೈಸೂರು | ಕಿರುಕುಳ ತಪ್ಪಿಸಿ: ಮೊರೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2020, 9:47 IST
Last Updated 30 ಜೂನ್ 2020, 9:47 IST

ಮೈಸೂರು: ‘ಸಮರ್ಪಕ ದಾಖಲೆ ಇರುವ ಜಮೀನು ಖರೀದಿಸಿದ್ದರೂ, ಕೆಲವರು ಅನಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ’ ಎಂದು ಎಚ್‌.ಎಸ್.ಶೋಭಾ, ವಿ.ಸುಚಿತ್ರಾ ದೂರಿದರು.

‘ಮೈಸೂರು ತಾಲ್ಲೂಕಿನ ವರುಣಾ ಹೋಬಳಿಯ ಭುಗತಹಳ್ಳಿ ಗ್ರಾಮದಲ್ಲಿ ನಾವು ಜಮೀನು ಖರೀದಿಸಿದ್ದೇವೆ. ಈ ಜಮೀನಿಗೆ ಸಂಬಂಧಿಸಿದ ಯಾವೊಂದು ತಕರಾರು ಇಲ್ಲ. ಆದರೂ ಕೆಲವರು ದುರುದ್ದೇಶದಿಂದ ನಮಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಇಬ್ಬರೂ ನಗರದಲ್ಲಿ ಮಂಗಳವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ಒಂದು ವರ್ಷದಿಂದಲೂ ಕ್ರಯದಾರರಾದ ನಮಗೆ ಮಾನಸಿಕ ಕಿರುಕುಳ ನೀಡುವ ಜೊತೆಗೆ, ಜಮೀನಿನ ಅಭಿವೃದ್ಧಿಗೂ ಆಸ್ಪದ ಕೊಡುತ್ತಿಲ್ಲ. ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ನಮಗೆ ನ್ಯಾಯ ಒದಗಿಸಿಕೊಡಿ’ ಎಂದು ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.