ADVERTISEMENT

ಮೈಸೂರು| ಉಡ ಮಾರಾಟ ಯತ್ನ; ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 4:22 IST
Last Updated 1 ನವೆಂಬರ್ 2020, 4:22 IST
ಆರೋಪಿಯಿಂದ ರಕ್ಷಿಸಿದ ಉಡ
ಆರೋಪಿಯಿಂದ ರಕ್ಷಿಸಿದ ಉಡ   

ಮೈಸೂರು: ಉಡ ಮಾರಾಟ ಮಾಡಲು ಯತ್ನಿಸಿದ ಮಂಡ್ಯದ ಶ್ರೀರಂಗಪಟ್ಟಣ ತಾಲ್ಲೂಕಿನ ಬೋವಿ ಕಾಲೊನಿ ನಿವಾಸಿ ರಾಮಾಚಾರಿ ಎಂಬಾತನನ್ನು ಅರಣ್ಯ ಸಂಚಾರ ದಳದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.

ಖರೀದಿದಾರರಂತೆ ಸೋಗು ಹಾಕಿದ ಅಧಿಕಾರಿಗಳು ಈತನ ಬಳಿ ಇದ್ದ 1.25 ಅಡಿ ಉದ್ದದ ಉಡವನ್ನು ರಕ್ಷಿಸಿದ್ದಾರೆ.

ತಾನು ಹಂದಿ ಸಾಕಾಣೆ ಮಾಡುತ್ತಿದ್ದ ಜಾಗದಲ್ಲಿ ಹಂದಿಗೆ ಹಾಕಲಾಗುತ್ತಿದ್ದ ಆಹಾರವನ್ನು ತಿನ್ನಲು ಈ ಉಡ ಬಂದಿತ್ತು. ಇದನ್ನು ಉರುಳು ಹಾಕಿ ಹಿಡಿದೆ ಎಂದು ವಿಚಾರಣೆ ವೇಳೆ ಆರೋಪಿ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಡಿಸಿಎಫ್‌ ಪೂವಯ್ಯ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಆರ್‌ಎಫ್‌ಒ ವಿವೇಕ್, ಸಿಬ್ಬಂದಿಯಾದ ಮೋಹನ್, ಲಕ್ಷ್ಮೀಶ್, ಪ್ರಮೋದ್, ಸುಂದರ್ ತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.