ADVERTISEMENT

ಪಿರಿಯಾಪಟ್ಟಣ: ಬೋರ್ಲಿಂಗೇಶ್ವರ ಜಾತ್ರಾ ಮಹೋತ್ಸವ ಸಂಪನ್ನ

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 15:41 IST
Last Updated 24 ಜೂನ್ 2025, 15:41 IST
ಅಲನಹಳ್ಳಿ ಗ್ರಾಮದಲ್ಲಿ ಸೋಮವಾರ ಬೋರ್ಲಿಂಗೇಶ್ವರ ಲಕ್ಷ್ಮೀದೇವಿ ಮತ್ತು ಹೊನ್ನೂರು ರಂಗಸ್ವಾಮಿ ದೇವರ ಉತ್ಸವ ಮತ್ತು ಜಾತ್ರೆಯಲ್ಲಿ ಭಕ್ತರು ಹರಕೆ ತೀರಿಸುವ ಸಲುವಾಗಿ ದೇವಾಲಯದ ಮುಂದೆ ಬಾಳೆಗೊನೆ ಕಟ್ಟಿದರು
ಅಲನಹಳ್ಳಿ ಗ್ರಾಮದಲ್ಲಿ ಸೋಮವಾರ ಬೋರ್ಲಿಂಗೇಶ್ವರ ಲಕ್ಷ್ಮೀದೇವಿ ಮತ್ತು ಹೊನ್ನೂರು ರಂಗಸ್ವಾಮಿ ದೇವರ ಉತ್ಸವ ಮತ್ತು ಜಾತ್ರೆಯಲ್ಲಿ ಭಕ್ತರು ಹರಕೆ ತೀರಿಸುವ ಸಲುವಾಗಿ ದೇವಾಲಯದ ಮುಂದೆ ಬಾಳೆಗೊನೆ ಕಟ್ಟಿದರು   

ಪಿರಿಯಾಪಟ್ಟಣ: ತಾಲ್ಲೂಕಿನ ಅಲನಹಳ್ಳಿ ಗ್ರಾಮದಲ್ಲಿ ಸೋಮವಾರ ಬೋರ್ಲಿಂಗೇಶ್ವರ ಲಕ್ಷ್ಮೀದೇವಿ ಮತ್ತು ಹೊನ್ನೂರು ರಂಗಸ್ವಾಮಿ ದೇವರ ಉತ್ಸವ ಮತ್ತು ಜಾತ್ರೆ ವಿಜೃಂಭಣೆಯಿಂದ ನೆರೆವೇರಿತು.

ಭಾನುವಾರ ರಾತ್ರಿ ಗ್ರಾಮದಿಂದ ದೇವಸ್ಥಾನದವರೆಗೆ ಮೆರವಣಿಗೆ ಮೂಲಕ ದೇವರ ಉತ್ಸವ ಮೂರ್ತಿಯನ್ನು ತರಲಾಯಿತು. ಸೋಮವಾರ ಬೆಳಿಗ್ಗೆ ದೇವರಿಗೆ ವಿಶೇಷವಾಗಿ ಪೂಜೆ ಕೈಂಕರ್ಯಗಳನ್ನು ನಡೆಸಲಾಯಿತು. ಬಾಳೆಗೊನೆಯನ್ನು ಕಟ್ಟುವ ಮೂಲಕ ಭಕ್ತರು ಹರಕೆ, ಪೂಜೆ ನೆರವೇರಿಸಿದರು.

ಗ್ರಾಮದ ಎಲ್ಲ ಸಮುದಾಯದ ಮುಖಂಡರು, ಗ್ರಾಮಸ್ಥರು, ಜೈ ಭೀಮ್ ಯುವಕ ಸಂಘದ ಸದಸ್ಯರು ಹಾಜರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.