ADVERTISEMENT

ಮೈಸೂರು: ಬಸ್ಸು–ಗೂಡ್ಸ್‌ ಆಟೊ ಡಿಕ್ಕಿ; ಮೂವರ ಸಾವು

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2021, 14:39 IST
Last Updated 10 ಅಕ್ಟೋಬರ್ 2021, 14:39 IST
   

ಮೈಸೂರು: ತಾಲ್ಲೂಕಿನ ವರಕೋಡು ಗ್ರಾಮದ ಮೈಸೂರು–ತಿ.ನರಸೀಪುರ ಹೆದ್ದಾರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ – ಗೂಡ್ಸ್‌ ಆಟೊ ನಡುವೆ ಭಾನುವಾರ ಸಂಜೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ತಿ.ನರಸೀಪುರದ ನಿವಾಸಿಗಳಾದ ಇಮ್ರಾನ್‌ (30), ಯಾಸ್ಮೀನ್‌ ತಾಜ್‌ (28) ಹಾಗೂ ಅಫ್ನಾನ್‌ (3) ಮೃತಪಟ್ಟವರು. ಅಕ್ಬರ್‌ ಪಾಷಾ, ಬಾಬು ಮತ್ತು ಶಬಾನಾ ಗಾಯಗೊಂಡವರು.

ತಿ.ನರಸೀಪುರದಿಂದ ಮೈಸೂರಿನತ್ತ ಬರುತ್ತಿದ್ದ ಆಟೊ ಹಾಗೂ ಮೈಸೂರಿನಿಂದ ತಿ.ನರಸೀಪುರ ಕಡೆಗೆ ಹೋಗುತ್ತಿದ್ದ ಬಸ್‌, ವರಕೋಡು ಗ್ರಾಮದ ಪೇಪರ್‌ ಮಿಲ್‌ ಸಮೀಪದ ತಿರುವಿನಲ್ಲಿ ಮುಖಾಮುಖಿ ಡಿಕ್ಕಿಯಾಗಿವೆ.

ADVERTISEMENT

ಈ ಸಂಬಂಧ ವರುಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.