ADVERTISEMENT

ಸರಗಳವು: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 14:57 IST
Last Updated 8 ಡಿಸೆಂಬರ್ 2018, 14:57 IST

ಮೈಸೂರು: ಬೃಂದಾವನ ಬಡಾವಣೆಯಲ್ಲಿ ಮಹಿಳೆಯ ಸರಗಳವು ಮಾಡಿದ್ದ ಆರೋಪಿಯನ್ನು ವಿ.ವಿ.ಪುರಂ ಪೊಲೀಸರು 24 ಗಂಟೆಗೊಳಗೆ ಬಂಧಿಸಿದ್ದಾರೆ.

ಡಿ. 5ರ ಸಂಜೆ ಚಂದ್ರಕಲಾ ಎಂಬುವವರು ಮನೆಗೆ ನಡೆದು ಹೋಗುತ್ತಿದ್ದಾಗ ತಮಿಳುನಾಡಿನ ಗಾಜನೂರಿನ ಉಮೇಶ್‌ (28) ಎಂಬಾತ ಸರವನ್ನು ಕಿತ್ತು ಪರಾರಿಯಾಗಿದ್ದಾನೆ.

ಕದ್ದ ಸರವನ್ನು ಮಾರಾಟ ಮಾಡುವ ವೇಳೆ ಉಮೇಶ್‌ ಮರುದಿನವೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಖಚಿತ ಮಾಹಿತಿಯ ಮೇಲೆ ದಾಳಿ ಮಾಡಿದ ಪೊಲೀಸರು ಬಂಧಿತನಿಂದ 12 ಗ್ರಾಂ ತೂಕದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.