ADVERTISEMENT

ಸರಗೂರು: ಸಾವಿನಲ್ಲೂ ಒಂದಾದ ದಂಪತಿ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 10:33 IST
Last Updated 21 ಆಗಸ್ಟ್ 2020, 10:33 IST
ಚೂಡಾಮಣಿ, ಸೋಮಾಚಾರ್
ಚೂಡಾಮಣಿ, ಸೋಮಾಚಾರ್   

ಸರಗೂರು: ಮೂಲತಃ ತಾಲ್ಲೂಕಿನ ಹಲಸೂರು ಗ್ರಾಮದ ಸೋಮಾಚಾರ್ ಉರ್ಫ್ ಅಣ್ಣಯ್ಯಸ್ವಾಮಿ ಮತ್ತು ಪತ್ನಿ ಚೂಡಾಮಣಿ ಇಬ್ಬರು ಮೈಸೂರಿನ ಮಂಚೇಗೌಡನಕೊಪ್ಪಲಿನಲ್ಲಿ ನಿಧನರಾಗಿದ್ದು, ಸಾವಿನಲ್ಲೂ ಒಂದಾಗಿದ್ದಾರೆ.

ಇವರು ಮಂಚೇಗೌಡನಕೊಪ್ಪಲಿನಲ್ಲಿ ವಾಸವಾಗಿದ್ದರು. ಬುಧವಾರ ಸಂಜೆ 4 ಗಂಟೆ ಸುಮಾರಿಗೆ ಚೂಡಾಮಣಿ (60) ಅವರಿಗೆ ಎದೆನೋವು ಕಾಣಿಸಿಕೊಂಡು ಅವರು ಮನೆಯಲ್ಲಿ ನಿಧನರಾದರು. ಪತ್ನಿ ಮೃತಪಟ್ಟ ಸ್ವಲ್ಪ ಸಮಯದಲ್ಲಿ ಗಂಡ ಸೋಮಾಚಾರ್ (70) ಅವರಿಗೂ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ಮೈಸೂರಿನ ಜಯದೇವ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಗುರುವಾರ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಅವರು ಕೊನೆಯುಸಿರೆಳೆದರು.

ಸಾವನ್ನಪ್ಪಿದ ದಂಪತಿಯ ಶವಗಳನ್ನು ಆಂಬುಲೆನ್ಸ್ ಮೂಲಕ ಸರಗೂರು ತಾಲ್ಲೂಕಿನ ಹಲಸೂರು ಗ್ರಾಮಕ್ಕೆ ಗುರುವಾರ ತಂದು ಅಂತ್ಯಕ್ರಿಯೆ ಮಾಡಲಾಯಿತು.

ADVERTISEMENT

ಅವರಿಗೆ ಇಬ್ಬರು ಪುತ್ರ, ಪುತ್ರಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.