ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡ ಸ್ತಬ್ಧಚಿತ್ರಗಳಿಗೆ ಬಹುಮಾನ ಪ್ರಕಟವಾಗಿದೆ. ಈ ಬಾರಿ ವಿಭಾಗವಾರು ಬಹುಮಾನ ನೀಡಲಾಗಿದೆ. ಫಲಿತಾಂಶ ಇಂತಿದೆ:
ಬೆಂಗಳೂರು ವಿಭಾಗ: ರಾಜ ವೀರಮದಕರಿ ನಾಯಕ (ಚಿತ್ರದುರ್ಗ)–1, ಬ್ರಾಂಡ್ ಬೆಂಗಳೂರಿನತ್ತ ದಿಟ್ಟ ಹೆಜ್ಜೆ (ಬೆಂಗಳೂರು ನಗರ)–2, ನವ್ಯ ಮತ್ತು ಪ್ರಾಚೀನ ಶಿಲ್ಪಕಲಾ ಸಂಕೀರ್ಣ (ತುಮಕೂರು)–3.
ಕಲಬುರಗಿ ವಿಭಾಗ: ಬೀದರ್ ಕೋಟೆ (ಬೀದರ್)–1, ಕಿನ್ನಾಳ ಕಲೆ (ಕೊಪ್ಪಳ)–2, ವಿಶಿಷ್ಟ ವಿಜಯನಗರ (ವಿಜಯನಗರ)–3; ಬೆಳಗಾವಿ ವಿಭಾಗ: ಮಾಯಕ್ಕದೇವಿ (ಬೆಳಗಾವಿ)–3.
ಮೈಸೂರು ವಿಭಾಗ: ಪ್ರಕೃತಿ ಸೌಹಾರ್ದತೆಯೊಂದಿಗೆ ಪ್ರಗತಿಯತ್ತ ಸಾಗೋಣ (ಚಾಮರಾಜನಗರ)–1, ದೈವಾರಾಧನೆ, ಸಾಂಪ್ರದಾಯಿಕ ಕ್ರೀಡೆ (ದಕ್ಷಿಣ ಕನ್ನಡ)–2, ಜ್ಞಾನಿ ವಿಜ್ಞಾನಿಗಳ ನಾಡು (ಚಿಕ್ಕಮಗಳೂರು)–3.
ಕೇಂದ್ರ, ರಾಜ್ಯ, ವಿವಿಧ ನಿಗಮಗಳ ವಿಭಾಗಗಳು: ವಿಜಯ ರನ್ವೇ (ಎಚ್ಎಎಲ್)–1, ಡ್ರಗ್ಸ್ ಮುಕ್ತ ಕ್ಯಾಂಪಸ್ ಅಭಿಯಾನ (ರಾಜೀವ್ಗಾಂಧಿ ಆರೋಗ್ಯ ವಿಜ್ಞಾನಗಳ ವಿ.ವಿ)–2, ಸುಂದರ, ಸ್ವಚ್ಛ ಪರಿಸರ (ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ)–3, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟ (ಪ್ರವಾಸೋದ್ಯಮ ಇಲಾಖೆ) ಹಾಗೂ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ– ಎರಡಕ್ಕೂ ಸಮಾಧಾನಕರ ಬಹುಮಾನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.