ಮೈಸೂರು: ಮೈಸೂರು ನಗರದ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ವರ್ಗಾವಣೆಯ ಹಗ್ಗಜಗ್ಗಾಟ ನಡೆದಿದೆ.
2015ನೇ ಬ್ಯಾಚಿನ ಐಪಿಎಸ್ ಅಧಿಕಾರಿ ಡಾ.ಎ.ಎನ್.ಪ್ರಕಾಶ್ಗೌಡ ಗುರುವಾರ ಮತ್ತೆ ಮೈಸೂರು ಡಿಸಿಪಿಯಾಗಿ ವರ್ಗಗೊಂಡಿದ್ದಾರೆ.
ಹಾಲಿ ಡಿಸಿಪಿಯಾಗಿದ್ದ ಮುತ್ತುರಾಜ್ ಅವರಿಗೆ ಯಾವುದೇ ಸ್ಥಳ, ಹುದ್ದೆ ನಿಯುಕ್ತಿಗೊಳಿಸದೆ ವರ್ಗ ಮಾಡಲಾಗಿದೆ.
ಪ್ರಕಾಶ್ಗೌಡ ಈ ಹಿಂದೆ ಮುತ್ತುರಾಜ್ ಜಾಗಕ್ಕೆ ಡಿಸಿಪಿಯಾಗಿ ವರ್ಗಾವಣೆಗೊಂಡಿದ್ದರು. ಅಧಿಕಾರವನ್ನು ಸ್ವೀಕರಿಸಿದ್ದರು. ಮುತ್ತುರಾಜ್ ಸಿಎಟಿಯಿಂದ ತಡೆಯಾಜ್ಞೆ ತಂದು, ಅದೇ ಹುದ್ದೆಯಲ್ಲಿ ಮುಂದುವರೆದಿದ್ದರು.
ವಿಚಾರಣೆ ನಡೆಸಿದ ಸಿಎಟಿ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದು, ಪ್ರತಿಯನ್ನು ರಾಜ್ಯ ಸರ್ಕಾರದ ಕಾರ್ಯದರ್ಶಿಗೆ ರವಾನಿಸಿದೆ. ಇದರ ಬೆನ್ನಿಗೆ ಈ ವರ್ಗಾವಣೆ ನಡೆದಿದೆ.
ಈ ಹಿಂದೆ ಒಂದು ದಿನವಷ್ಟೇ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಡಾ.ಎ.ಎನ್ ಪ್ರಕಾಶ್ಗೌಡ ಇದೀಗ ಮತ್ತೆ ವರ್ಗಾವಣೆಗೊಂಡಿದ್ದು, ಅಧಿಕಾರ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.