ADVERTISEMENT

ನಾಡಬಾಂಬ್ ಕಚ್ಚಿದ ಸಾಕುನಾಯಿ ಸಾವು; ದೂರು ದಾಖಲು

ಕಾಡು ಹಂದಿಗಳ ಬೇಟೆಗಾಗಿ ನಾಡಬಾಂಬ್ ಇಡುವ ಬೇಟೆಗಾರರು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 12:34 IST
Last Updated 20 ಆಗಸ್ಟ್ 2020, 12:34 IST
ಎಚ್.ಡಿ.ಕೋಟೆ ತಾಲ್ಲೂಕಿನ ಟೈಗರ್‌ ಬ್ಲಾಕ್‌ ಗ್ರಾಮದ ಜನರು ಬೇಟೆಯಾಡಲು ಜಮೀನಿನ ಒಳಗೆ ನುಸುಳಿರುವುದು
ಎಚ್.ಡಿ.ಕೋಟೆ ತಾಲ್ಲೂಕಿನ ಟೈಗರ್‌ ಬ್ಲಾಕ್‌ ಗ್ರಾಮದ ಜನರು ಬೇಟೆಯಾಡಲು ಜಮೀನಿನ ಒಳಗೆ ನುಸುಳಿರುವುದು   

ಎಚ್.ಡಿ.ಕೋಟೆ: ತಾಲ್ಲೂಕಿನ ಟೈಗರ್‌ ಬ್ಲಾಕ್‌ ಗ್ರಾಮದ ರೈತ ಆರ್ಮುಗಂ ಜಮೀನಿನಲ್ಲಿ ನಾಡ ಬಾಂಬ್‌ಗೆ ಅವರ ಸಾಕು ನಾಯಿ ಬಲಿಯಾಗಿದೆ.

ಹಂದಿಗಳ ಬೇಟೆಗಾಗಿ ಅಡಿಕೆ ಕಾಯಿ ಗಾತ್ರದಲ್ಲಿ ನಾಡ ಬಾಂಬ್‌ ತಯಾರಿಸಿ ಕೋಳಿಯ ಮಾಂಸದ ಜೊತೆ ಹಂದಿಗಳ ಓಡಾಟ ಇರುವ ಕಡೆಗಳಲ್ಲಿ ರೈತರ ಜಮೀನುಗಳಲ್ಲಿಯೇ ಇಡುತ್ತಾರೆ ಎಂದು ಆರ್ಮುಗಂ ತಿಳಿಸಿದರು.

ಈ ಸಂಬಂಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಗುರುವಾರ ದೂರು ನೀಡಲಾಗಿದ್ದು, ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

‘ಗ್ರಾಮದಲ್ಲಿ ಬೇಟೆಗಾರರ ತಂಡವಿದ್ದು ರೈತರ ಜಮೀನು ಮತ್ತು ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದೆ. ಕೋಳಿಯ ಮಾಂಸದೊಂದಿಗೆ ಸಿಡಿಮದ್ದನ್ನು ಅಡಗಿಸಿಟ್ಟು, ಕಾಡು ಹಂದಿಯನ್ನು ಬೇಟೆಯಾಡುತ್ತಾರೆ. ಬೇಟೆಗಾರರ ಹಾವಳಿ ಅಧಿಕವಾಗಿದ್ದು, ಇವರು ಅಡಗಿಸಿಟ್ಟ ಸಿಡಿಮದ್ದನ್ನು ತಿನ್ನಲು ಹೋದ ನಾಯಿ ಸತ್ತಿದೆ. ಮನುಷ್ಯರು ಏನಾದರೂ ಇದನ್ನು ತುಳಿದಿದ್ದರೂ ಸಹ ಅಪಾಯವಾಗುತ್ತಿತ್ತು, ಪೊಲೀಸರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಈ ಕುರಿತು ಗಮನಹರಿಸಬೇಕು’ ಎಂದು ಆರ್ಮುಗಂ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.