ADVERTISEMENT

ಆನೆ ದಾಳಿ: ವೃದ್ಧ ಸಾವು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2020, 1:49 IST
Last Updated 20 ನವೆಂಬರ್ 2020, 1:49 IST
ಆನೆ ದಾಳಿಯಿಂದ ಹಾನಿಗೊಳಗಾಗಿರುವ ಮನೆ
ಆನೆ ದಾಳಿಯಿಂದ ಹಾನಿಗೊಳಗಾಗಿರುವ ಮನೆ   

ಎಚ್.ಡಿ.ಕೋಟೆ: ತಾಲ್ಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿ ಕಾಡಾನೆಯೊಂದು ಗುರುವಾರ ದಾಳಿ ನಡೆಸಿದ್ದು, ಚಿನ್ನಪ್ಪ (61) ಎಂಬುವವರು ಮೃತಪಟ್ಟಿದ್ದಾರೆ.

ಆನಂತರ, ಆನೆಯು ಅವರ ಮನೆ ಮೇಲೂ ದಾಳಿ ನಡೆಸಿದೆ. ದಾಳಿಯಲ್ಲಿ ಚಿನ್ನಪ್ಪ ಅವರ ಪತ್ನಿ ಕೊಟ್ಟೂರಮ್ಮ ಗಾಯಗೊಂಡಿದ್ದು, ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

ಆನೆ ದಾಳಿಯಿಂದ ಎರಡು ಮನೆಗಳು ಹಾಗೂ ಒಂದು ಬೈಕ್‌ ಜಖಂಗೊಂಡಿವೆ.

ADVERTISEMENT

ಅರಣ್ಯ ಇಲಾಖೆ ವತಿಯಿಂದ ಶಾಸಕ ಅನಿಲ್‌ ಕುಮಾರ್‌ ಸಮ್ಮುಖದಲ್ಲಿ ₹ 2.5 ಲಕ್ಷ ಪರಿಹಾರದ ಚೆಕ್‌ ಅನ್ನುಮೃತ ವೃದ್ಧನ ಪತ್ನಿಕೊಟ್ಟೂರಮ್ಮಅವರಿಗೆ ನೀಡಲಾಯಿತು.ಉಳಿದ ₹ 5 ಲಕ್ಷ ಪರಿಹಾರವನ್ನು ಇನ್ನೆರಡು ದಿನಗಳಲ್ಲಿ ಕೊಡಿಸಲಾಗುವುದು ಎಂದು ಅನಿಲ್‌ ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.