ADVERTISEMENT

ಹಿರಿಯ ಪತ್ರಕರ್ತರಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 13:37 IST
Last Updated 15 ಆಗಸ್ಟ್ 2022, 13:37 IST
ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ‘ಆಫ್ತಾಬ್-ಇ- ಕರ್ನಾಟಕ’ ಉರ್ದು ಪತ್ರಿಕೆಯ ರಹಮತುಲ್ಲಾಖಾನ್ ಅವರನ್ನು ಸುಭಾಷ್ ನಗರದ ನಿವಾಸದಲ್ಲಿ ಸನ್ಮಾನಿಸಿದರು
ಜಿಲ್ಲಾ ಪತ್ರಕರ್ತರ ಸಂಘದ ಪದಾಧಿಕಾರಿಗಳು ‘ಆಫ್ತಾಬ್-ಇ- ಕರ್ನಾಟಕ’ ಉರ್ದು ಪತ್ರಿಕೆಯ ರಹಮತುಲ್ಲಾಖಾನ್ ಅವರನ್ನು ಸುಭಾಷ್ ನಗರದ ನಿವಾಸದಲ್ಲಿ ಸನ್ಮಾನಿಸಿದರು   

ಮೈಸೂರು: ಜಿಲ್ಲಾ ಪತ್ರಕರ್ತರ ಸಂಘದಿಂದ ಹಿರಿಯ ಪತ್ರಕರ್ತರನ್ನು ಸೋಮವಾರ ಗೌರವಿಸಲಾಯಿತು.

‘ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಸಂದರ್ಭದಲ್ಲಿ ಹಿರಿಯ ಪತ್ರಕರ್ತರನ್ನು ಅವರ ನಿವಾಸಕ್ಕೆ ತೆರಳಿ‌ ಸನ್ಮಾನಿಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಸೂಚಿಸಿದ್ದ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಯಿತು. ಸಂಘದ ಪದಾಧಿಕಾರಿಗಳು ‘ಆಫ್ತಾಬ್-ಇ- ಕರ್ನಾಟಕ’ ಉರ್ದು ಪತ್ರಿಕೆಯ ರಹಮತುಲ್ಲಾಖಾನ್ ಅವರನ್ನು ಸುಭಾಷ್ ನಗರದ ಅವರ ನಿವಾಸದಲ್ಲಿ ಸನ್ಮಾನಿಸಿದರು.

‘ಆಕಾಶವಾಣಿ’ಯಲ್ಲಿ ಕಾರ್ಯನಿರ್ವಹಿಸಿದ ಕೆ.ವಿ. ಶ್ರೀನಿವಾಸನ್ (ಬ್ರದರ್) ಅವರನ್ನು ಹುಣಸೂರು ತಾಲ್ಲೂಕಿನ ಕಲ್ಕುಣಿಕೆಯಲ್ಲಿರುವ ನಿವಾಸದಲ್ಲಿ ಗೌರವಿಸಿದರು. ಈ ಮೂಲಕ ಸ್ವಾತಂತ್ರ್ಯ ದಿನವನ್ನು ವಿಶೇಷವಾಗಿ ಆಚರಿಸಿದರು.

ADVERTISEMENT

ರಹಮತುಲ್ಲಾಖಾನ್ ಅವರನ್ನು ಸನ್ಮಾನಿಸುವ ವೇಳೆ ಮಾಜಿ ಮೇಯರ್ ಆರಿಫ್ ಹುಸೇನ್ ₹ 5ಸಾವಿರ ನೀಡಿದರು.

‘ಜಿಲ್ಲಾ ಪತ್ರಕರ್ತರ ಸಂಘವು ಸ್ವಾತಂತ್ರ್ಯ ಅಮೃತ ಮಹೋತ್ಸವದದ ಸಂದರ್ಭದಲ್ಲಿ ಉತ್ತಮ ಕಾರ್ಯ ಮಾಡಿದೆ’ ಎಂದು ಸನ್ಮಾನಿತರು ಪ್ರಶಂಸಿದರು.

ಸಂಘದ ಅಧ್ಯಕ್ಷ ಎಸ್.ಟಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ರಾಜ್ಯ ಸಮಿತಿ ಸದಸ್ಯ ಬಿ.ರಾಘವೇಂದ್ರ, ಉರ್ದು ಪತ್ರಿಕೆ ವರದಿಗಾರ ಅಫ್ಸರ್ ಪಾಷ, ನಯೀಮುಲ್ಲಾ, ಕೈಸರ್ ಅಹಮದ್ ಹಾಗೂ ಮಾಜಿ ಮೇಯರ್ ಆರಿಫ್ ಹುಸೇನ್, ಹುಣಸೂರು ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್, ಪತ್ರಕರ್ತರಾದ ಹನಗೋಡು ನಟರಾಜ್, ಸಂಪತ್ ಕುಮಾರ್, ಪ್ರತಾಪ್ ಪಾಲ್ಗೊಂಡಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.