ADVERTISEMENT

ಮೈಸೂರು: ಅರ್ಧ ಕೆ.ಜಿ. ಬಂಗಾರ ಕಳವು

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 6:59 IST
Last Updated 6 ಜೂನ್ 2021, 6:59 IST

ಮೈಸೂರು: ನಗರದ ಮಂಡಿ ಮೊಹಲ್ಲಾದ ಕರಿಂ ಬ್ಲಾಕ್‌ನ ಸಯ್ಯದ್‌ ಜಾಕೀರ್‌ ಎಂಬುವರ ನಿವಾಸದಲ್ಲಿ 504 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದೆ.

‘ತಮ್ಮನೊಂದಿಗೆ ಮನೆಯಲ್ಲಿ ಮಲಗಿದ್ದೆ. ರಾತ್ರಿ ವೇಳೆ ಕಿಟಕಿಯಿಂದ ಮುಖ್ಯ ಬಾಗಿಲಿನ ಚಿಲಕ ತೆಗೆದುಕೊಂಡು ಒಳ ನುಗ್ಗಿರುವ ಕಳ್ಳರು, ನಾವು ಮಲಗಿದ್ದ ರೂಮುಗಳ ಬಾಗಿಲನ್ನು ಹೊರಗಿನಿಂದ ಹಾಕಿಕೊಂಡಿದ್ದಾರೆ.

ನಂತರ ಮತ್ತೊಂದು ರೂಮಿನಲ್ಲಿದ್ದ ಬೀರುವಿನ ಬಾಗಿಲು ತೆಗೆದು, ಅದರೊಳಗಿದ್ದ ಅರ್ಧ ಕೆ.ಜಿ.ತೂಕದ ಚಿನ್ನಾಭರಣಗಳನ್ನು ಕದ್ದೊಯ್ದಿದ್ದಾರೆ ಎಂದು ಸಯ್ಯದ್‌ ಜಾಕೀರ್ ದೂರು ಕೊಟ್ಟಿದ್ದಾರೆ’ ಎಂದು ಮಂಡಿ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.