ಮೈಸೂರು: ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 80ನೇ ವರ್ಷದ ಜನ್ಮದಿನೋತ್ಸವದ ಪ್ರಯುಕ್ತ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸಹಸ್ರ ಚಂದ್ರ ದರ್ಶನ ಶಾಂತಿ ಮಹೋತ್ಸವದಲ್ಲಿ ಶನಿವಾರ ಬೆಳಿಗ್ಗೆ ಪ್ರಧಾನಯಾಗ-ಆಯುಷ್ಯ ಹೋಮ ಮತ್ತು ಲಕ್ಷ್ಮಿ ನಾರಾಯಣ ಹೋಮ ನೆರವೇರಿತು.
ನಂತರ ದಶದಾನಗಳನ್ನು ಋತ್ವಿಕರಿಗೆ ಸ್ವಾಮೀಜಿ ನೀಡಿದರು. ಗಣಪತಿ ಸೇರಿ ಎಲ್ಲಾ ದೇವರಿಗೆ ಗಣಪತಿ ಸ್ವಾಮೀಜಿ ಹಾಗೂ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಧನ ಕನಕ ಸಹಿತ ಪೂಜೆ ನೆರವೇರಿಸಿದರು. ವಿಷ್ಣುಸಹಸ್ರ ನಾಮ ಪಾರಾಯಣವೂ ನಡೆಯಿತು. ಅತ್ಯಂತ ಪ್ರಮುಖವಾದ ಕನಕಾಭಿಷೇಕವನ್ನು ಭಕ್ತರ ಪರವಾಗಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಕಿರಿಯ ಶ್ರೀಗಳು ನೆರವೇರಿಸಿದರು.
ಶ್ರೀಗಳ ಶಿರದ ಮೇಲೆ ಚಿನ್ನದ ನಾಣ್ಯಗಳನ್ನು ಇಟ್ಟು ದೇವಾನುದೇವತೆಗಳನ್ನು ಆವಾಹಿಸಿದ ಜಲದಿಂದ ಕಿರಿಯ ಶ್ರೀಗಳು ಅಭಿಷೇಕ ಮಾಡಿ ಪೂಜಿಸಿದರು. ಭಕ್ತರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.