ADVERTISEMENT

ಭಾರತ ಯುವ ನಿಯೋಗ: ನಾಯಕರಾಗಿ ವರ್ಷ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 5:10 IST
Last Updated 25 ಫೆಬ್ರುವರಿ 2026, 5:10 IST
ಎಂ.ಪಿ.ವರ್ಷ
ಎಂ.ಪಿ.ವರ್ಷ   

ಮೈಸೂರು: ಶ್ರೀಲಂಕಾದ ರಾಷ್ಟ್ರೀಯ ಯುವ ಸೇವೆಗಳ ಮಂಡಳಿಯು ಮಾರ್ಚ್ 7ರಿಂದ 13ರವರೆಗೆ ಆಯೋಜಿಸಿರುವ ಇಂಡೋ–ಶ್ರೀಲಂಕಾ ಯುವ ವಿನಿಮಯ ಕಾರ್ಯಕ್ರಮ–2026ರಲ್ಲಿ ಭಾಗವಹಿಸುವ ಭಾರತದ ಯುವ ನಿಯೋಗವನ್ನು ಮುನ್ನಡೆಸಲು ನಗರದ ಕ್ರೆಡಿಟ್‌–ಐ ಸಂಸ್ಥೆ ವ್ಯವಸ್ಥಾಪಕ ಟ್ರಸ್ಟಿ ಎಂ.ಪಿ.ವರ್ಷ ಅವರನ್ನು ಇಂಡಿಯನ್ ಫೌಂಡೇಷನ್ ಫಾರ್ ಗ್ಲೋಬಲ್ ಪೀಸ್ ಎಜುಕೇಶನ್‌ ಆಯ್ಕೆ ಮಾಡಿದೆ.

ಕಾರ್ಯಕ್ರಮ ಅಂತರ್– ಸಾಂಸ್ಕೃತಿಕ ಸಂವಾದಕ್ಕೆ ಪ್ರೋತ್ಸಾಹ, ಶಾಂತಿಯುತ ಪರಿಸರ ವ್ಯವಸ್ಥೆಯತ್ತ ಸಾಗುವ, ಸಹಿಷ್ಣುತೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ. ನಿಯೋಗವು 18 ಜನರನ್ನು ಒಳಗೊಂಡಿದ್ದು, ತಂಡದ ನಾಯಕರಾಗಿ ವರ್ಷ ಅವರು ಮಾರ್ಗದರ್ಶನ ನೀಡಬೇಕು ಎಂದು ಫೌಂಡೇಷನ್ ಕಾರ್ಯಾಧ್ಯಕ್ಷ ಸಿಎನ್‌ಎನ್‌ ರಾಜು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT