ADVERTISEMENT

ಅಂತರ ಜಿಲ್ಲಾ ಬೈಕ್ ಕಳ್ಳರ ಸೆರೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2020, 3:06 IST
Last Updated 4 ಅಕ್ಟೋಬರ್ 2020, 3:06 IST
ಹುಣಸೂರು ನಗರ ಪೊಲೀಸರು ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಪೊಲೀಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಡಿವೈಎಸ್‌ಪಿ ಸುಂದರ ರಾಜ್ ಮತ್ತು ಸಿಪಿಐ ಪೂವಯ್ಯ ಇದ್ದಾರೆ
ಹುಣಸೂರು ನಗರ ಪೊಲೀಸರು ಅಂತರ ಜಿಲ್ಲಾ ಬೈಕ್ ಕಳ್ಳರನ್ನು ಪೊಲೀಸ್ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಡಿವೈಎಸ್‌ಪಿ ಸುಂದರ ರಾಜ್ ಮತ್ತು ಸಿಪಿಐ ಪೂವಯ್ಯ ಇದ್ದಾರೆ   

ಹುಣಸೂರು: ನಗರದ ಕಾರ್ಖಾನೆ ರಸ್ತೆಯಲ್ಲಿ ನಡೆದ ಮೋಟಾರ್ ಬೈಕ್ ಕಳವಿಗೆ ಸಂಬಂಧಿಸಿದ ಮೂವರು ಅಂತರ ಜಿಲ್ಲಾ ಕಳ್ಳರನ್ನು ಬಂಧಿಸಲಾಗಿದೆ ಎಂದು ಸಿಪಿಐ ಪೂವಯ್ಯ ತಿಳಿಸಿದರು.

ಮೈಸೂರು ಜಿಲ್ಲೆ ಹುಣಸೂರು, ಮಡಿಕೇರಿ ಮತ್ತು ಹಾಸನ ಜಿಲ್ಲೆ ಅರಕಲಗೂಡು ಠಾಣೆ ವ್ಯಾಪ್ತಿಯಲ್ಲಿ ನಡೆದ ಬೈಕ್ ಕಳವು ಪ್ರಕರಣದಲ್ಲಿ ಮೂರು ಆರೋಪಿಗಳು ಭಾಗಿ ಆಗಿರುವುದು ತನಿಖೆಯಿಂದ ತಿಳಿದು ಬಂದಿದೆ.

ಕುಶಾಲನಗರದ ಸುಬ್ರಹ್ಮಣ್ಯ, ವಿಕ್ಟರ್ ಮತ್ತು ಮದನ್ ಬಂಧಿತ ಆರೋಪಿಗಳು.

ADVERTISEMENT

ಕಾರ್ಯಾಚರಣೆಯಲ್ಲಿ ಪಿಎಸ್ಐಗಳಾದ ಶಿವಕುಮಾರ್, ಲತೇಶ್‌ಕುಮಾರ್, ಪಂಚಾಕ್ಷರಿಸ್ವಾಮಿ, ಪ್ರಭಾಕರ್, ಪುಟ್ಟನಾಯಕ್ ಸಿಬ್ಬಂದಿ ಮಲ್ಲಿಕಾರ್ಜುನ, ಕಿರಣ್‌ಕುಮಾರ್, ಮನೋಹರ, ವೆಂಕಟೇಶ ಪ್ರಸಾದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.