ಹುಣಸೂರು: ಸುದ್ದಿವಾಹಿನಿಯೊಂದರ ವರದಿಗಾರ್ತಿ ಶ್ರುತಿ ಹಾಗೂ ಕ್ಯಾಮೆರಾಮೆನ್ ರಾಮಕೃಷ್ಣ ಎಂಬುವರನ್ನು ಗುರುವಾರ ರಾತ್ರಿ 8 ಜನರ ತಂಡವೊಂದು ಥಳಿಸಿ ಕ್ಯಾಮೆರಾ ಒಡೆದು ಹಾಕಿದೆ.
‘ಇವರು ರೆಹಮತ್ ಮೊಹಲ್ಲಾದಲ್ಲಿ ಹುಣಸೂರು ನಗರಸಭೆ ಚುನಾವಣೆ ಸಂಬಂಧ ಸಮೀಕ್ಷೆ ನಡೆಸಲು ಮತದಾರರನ್ನು ಮಾತನಾಡಿಸುತ್ತಿದ್ದಾಗ ಈ ಘಟನೆ ನಡೆದಿದೆ. ನಗರಸಭೆ ಮಾಜಿ ಸದಸ್ಯ ಮುಜೀಬ್ ಮತ್ತು ಮಕ್ಕಳಾದ ಬಷೀರ್ ಆಹಮ್ಮದ್, ಮತ್ತು ಹಸೀಬ್ ಆಹಮ್ಮದ್ ಸೇರಿದಂತೆ 8 ಜನರ ತಂಡ ಅಡ್ಡಿಪಡಿಸಿ, ಹಲ್ಲೆ ನಡೆಸಿದೆ. ಜತೆಗೆ, ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಇವರನ್ನು ಕೂಡಲೇ ಬಂಧಿಸಲಾಗಿದೆ’ ಎಂದು ಸಬ್ಇನ್ಸ್ಪೆಕ್ಟರ್ ಮಹೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.