ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪೌಷ್ಠಿಕಾಂಶಮತ್ತು ಆರೋಗ್ಯ ಶಿಕ್ಷಣದ ಸ್ನಾತಕೋತ್ತರ ಡಿಪ್ಲೊಮಾ ಪರೀಕ್ಷೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗದಗ್ರೂಪ್ ಸಿ ಹುದ್ದೆಯ ಪರೀಕ್ಷೆಗಳು ಡಿ. 19ರಂದು ನಿಗದಿಯಾಗಿದ್ದು, ಎರಡೂ ಪರೀಕ್ಷೆಗಳನ್ನು ಒಂದೇ ದಿನ ಬರೆಯುವುದಾದರೂ ಹೇಗೆ ಎಂದು ಅಭ್ಯರ್ಥಿಗಳುಪ್ರಶ್ನಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವಿವಿ ಕುಲಸಚಿವ ರಾಜಣ್ಣ, ‘ವಿದ್ಯಾರ್ಥಿಗಳ ಭವಿಷ್ಯ ನಮಗೆ ಮುಖ್ಯ. ಎರಡೂ ಪರೀಕ್ಷೆ ಬರೆಯುವವರು ಪರೀಕ್ಷೆಯ ಪ್ರವೇಶಪತ್ರದ ಪ್ರತಿಯೊಂದಿಗೆ ಮನವಿ ಪತ್ರ ನೀಡಿದ್ದಲ್ಲಿ ಪರೀಕ್ಷೆಯನ್ನು ಮುಂದೂಡಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.