ADVERTISEMENT

video: ನಾಡಹಬ್ಬ ಮೈಸೂರು ದಸರಾ; ಸಿಡಿಗುಂಡಿಗೆ ನಾವ್ ಹೆದರಲ್ಲ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 16:30 IST
Last Updated 12 ಸೆಪ್ಟೆಂಬರ್ 2022, 16:30 IST

ನಾಡಹಬ್ಬ ಮೈಸೂರು ದಸರಾ ಜಂಬೂ ಸವಾರಿಯ ದಿನವಾದ ವಿಜಯದಶಮಿಯಂದು 21 ಸುತ್ತಿನ ಕುಶಾಲ ತೋ‍ಪು ಸಿಡಿಸಲಾಗುತ್ತದೆ. ಆ ಸಮಯದಲ್ಲಿ ದಸರಾ ಆನೆಗಳು ಹಾಗೂ ಕುದುರೆಗಳು ಕಿವಿಗಡಚಿಕ್ಕುವ ಶಬ್ದದಂತೆ ಬೆಚ್ಚದಂತೆ ಮಾಡಲು, ದಸರಾ ಜಂಬೂ ಸವಾರಿ ಸಾಂಗವಾಗಿ ನಡೆಯುವಂತೆ ಮಾಡಲು ಕುಶಾಲ ತೋಪಿನ ತಾಲೀಮು ನೀಡುವುದು ವಾಡಿಕೆ. ಅದರಂತೆ ಅರಮನೆ ಆವರಣದ ವರಾಹ ದ್ವಾರದ ಬಳಿ ಕುಶಾಲ ತೋಪುಗಳಲ್ಲಿ ಸಿಡಿಮದ್ದನ್ನು ತುಂಬಿ ಸಿಡಿಸಲು 7 ಫಿರಂಗಿಗಳನ್ನು ಅಣಿಗೊಳಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.