ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಮಹಿಳೆ ವೃದ್ಧಾಶ್ರಮಕ್ಕೆ ದಾಖಲು

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 15:57 IST
Last Updated 28 ಜುಲೈ 2022, 15:57 IST
ಮಹಿಳೆಯನ್ನು ವಾಹನದಲ್ಲಿ ಕರೆದೊಯ್ದ ನಗರಪಾಲಿಕೆ ಸಿಬ್ಬಂದಿ
ಮಹಿಳೆಯನ್ನು ವಾಹನದಲ್ಲಿ ಕರೆದೊಯ್ದ ನಗರಪಾಲಿಕೆ ಸಿಬ್ಬಂದಿ   

ಮೈಸೂರು: ಇಲ್ಲಿನ ಜಯನಗರ ಮುಖ್ಯ ರಸ್ತೆಯ ಬಸ್ ನಿಲ್ದಾಣದಲ್ಲಿ ದಿನಬಳಕೆಯ ವಸ್ತುಗಳೊಂದಿಗೆ ತಂಗಿದ್ದ ಮಹಿಳೆಯನ್ನು ತಾಲ್ಲೂಕಿನ ದೊಡ್ಡಕಾನ್ಯದ ‘ಗ್ರೀನ್‌ ಡಾಟ್‌’ ಸಂಸ್ಥೆಯು ನಡೆಸುತ್ತಿರುವ ‘ಮಾನಸ ನೆಲೆ’ ಆರೈಕೆ ಮತ್ತು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿದೆ.

‘ಪ್ರಜಾವಾಣಿ’ಯಲ್ಲಿ ಜುಲೈ 23ರಂದು ಪ್ರಕಟವಾಗಿದ್ದ ‘ಈ ಮಹಿಳೆಗೆ ಬಸ್ ನಿಲ್ದಾಣವೇ ಆಸರೆ!’ ವರದಿಗೆ ಸ್ಪಂದಿಸಿದ ಮಹಾನಗರಪಾಲಿಕೆ ಸಿಬ್ಬಂದಿಯು ಆರೋಗ್ಯಾಧಿಕಾರಿ ಡಾ.ನಾಗರಾಜ್ ಸೂಚನೆ ಮೇರೆಗೆ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಮಹಾನಗರಪಾಲಿಕೆ ಡೇ–ನಲ್ಮ್‌ ವಿಭಾಗದ ಅಭಿಯಾನ ವ್ಯವಸ್ಥಾಪಕ ಡಾ.ಜೆ.ಎಸ್.ಭೈರಲಿಂಗಯ್ಯ ನೇತೃತ್ವದಲ್ಲಿ ಸಿಬ್ಬಂದಿಯು ಮಹಿಳೆಗೆ ನೆರವಾಗಿದ್ದಾರೆ.

‘ಪತ್ರಿಕೆಯಲ್ಲಿ ಬಂದ ವರದಿ ಗಮನಿಸಿ, ಮಹಿಳೆಯನ್ನು ಭೇಟಿಯಾಗಿ ಮಾಹಿತಿ ಪಡೆಯಲಾಯಿತು. ಆಶ್ರಯ ಕಲ್ಪಿಸುವುದಕ್ಕಾಗಿ ಎನ್‌ಜಿಒಗಳಿಗೂ ತಿಳಿಸಲಾಗಿತ್ತು. ‘ಅಭಯ’ ತಂಡ, ಎನ್‌ಜಿಒಗಳವರು ಹಾಗೂ ಅಶೋಕಪುರಂ ಪೊಲೀಸ್‌ ಠಾಣೆ ಸಿಬ್ಬಂದಿ ನೆರವಿನಲ್ಲಿ ಮಹಿಳೆಯನ್ನು ಕೆ.ಆರ್. ಆಸ್ಪತ್ರೆಗೆ ಕರೆದೊಯ್ದು ಕೌನ್ಸೆಲಿಂಗ್ ಮಾಡಿಸಲಾಯಿತು. ಅಗತ್ಯ ಚಿಕಿತ್ಸೆ ಕೊಡಿಸಲಾಗಿದೆ. ಭಾನುವಾರ ಅವರನ್ನು ಆರೈಕೆ ಕೇಂದ್ರಕ್ಕೆ ಕಳುಹಿಸಲಾಯಿತು’ ಎಂದು ಭೈರಲಿಂಗಯ್ಯ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.