ADVERTISEMENT

ಮಾವು ಮಾಗಿಸುವಾಗ ಇರಲಿ ಎಚ್ಚರ

ತೋಟಗಾರಿಕಾ ಇಲಾಖೆಯಿಂದ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 6 ಮೇ 2019, 19:58 IST
Last Updated 6 ಮೇ 2019, 19:58 IST
ತೋಟಗಾರಿಕಾ ಇಲಾಖೆ ವತಿಯಿಂದ ಮೈಸೂರಿನಲ್ಲಿ ನಡೆದ ‘ಕಾರ್ಬೈಡ್ ಮುಕ್ತ ಮಾವು’ ಕಾರ್ಯಾಗಾರದಲ್ಲಿ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಚಿದಂಬರ, ತೋಟಗಾರಿಕಾ ವಿಜ್ಞಾನಿ ಡಾ.ವೆಂಕಟೇಶ್‌ರಾವ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಅಬೀಬಾ ನಿಶಾದ್, ಎಪಿಎಂಸಿ ಕಾರ್ಯದರ್ಶಿ ಗಿರೀಶ್ ಭಾಗವಹಿಸಿದ್ದರು.
ತೋಟಗಾರಿಕಾ ಇಲಾಖೆ ವತಿಯಿಂದ ಮೈಸೂರಿನಲ್ಲಿ ನಡೆದ ‘ಕಾರ್ಬೈಡ್ ಮುಕ್ತ ಮಾವು’ ಕಾರ್ಯಾಗಾರದಲ್ಲಿ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಚಿದಂಬರ, ತೋಟಗಾರಿಕಾ ವಿಜ್ಞಾನಿ ಡಾ.ವೆಂಕಟೇಶ್‌ರಾವ್, ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಅಬೀಬಾ ನಿಶಾದ್, ಎಪಿಎಂಸಿ ಕಾರ್ಯದರ್ಶಿ ಗಿರೀಶ್ ಭಾಗವಹಿಸಿದ್ದರು.   

ಮೈಸೂರು: ಮಾವಿನಹಣ್ಣುಗಳನ್ನು ಮಾಗಿಸುವಾಗ ಕ್ಯಾಲ್ಸಿಯಂ ಕಾರ್ಬೈಡ್‌ನ್ನು ಬಳಸಲೇಬಾರದು ಎಂದು ಆಹಾರ ಸುರಕ್ಷತಾ ಅಂಕಿತ ಅಧಿಕಾರಿ (ಪ್ರಭಾರ) ಡಾ.ಚಿದಂಬರ ಕಿವಿಮಾತು ಹೇಳಿದರು.

ತೋಟಗಾರಿಕಾ ಇಲಾಖೆ ವತಿಯಿಂದ ಇಲ್ಲಿ ಸೋಮವಾರ ಏರ್ಪಡಿಸಿದ್ದ ‘ಕಾರ್ಬೈಡ್ ಮುಕ್ತ ಮಾವು’ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಹಣ್ಣುಗಳನ್ನು ಮಾಗಿಸಲು ಕೃತಕ ವಿಧಾನಗಳ ಮೊರೆ ಹೋಗಬಾರದು. ನೈಸರ್ಗಿಕವಾಗಿಯೇ ಹಣ್ಣು ಮಾಡಬೇಕು. ಒಂದು ವೇಳೆ ಕೃತಕವಾಗಿ ಹಣ್ಣು ಮಾಡುವಂತಹ ಪ್ರಮೇಯ ಬಂದಲ್ಲಿ ಯಾವುದೇ ಕಾರಣಕ್ಕೂ ಕ್ಯಾಲ್ಸಿಯಂ ಕಾರ್ಬೈಡ್‌ನ್ನು ಬಳಸಲೇಬಾರದು ಎಂದು ಹೇಳಿದರು.

ADVERTISEMENT

ಕ್ಯಾಲ್ಸಿಯಂ ಕಾರ್ಬೈಡ್ ಬಳಸಿ ಮಾಗಿಸಿದ ಹಣ್ಣುಗಳನ್ನು ಪದೇ ಪದೇ ನಿರಂತರವಾಗಿ ತಿನ್ನುತ್ತಾ ಹೋದರೆ ಕ್ಯಾನ್ಸರ್‌ ಉಂಟಾಗುವ ಅಪಾಯ ಇದೆ. ಹೀಗಾಗಿ, ಇದನ್ನು ಬಳಸದೇ ಎಥಿಲಿನ್‌ ಆಕ್ಸೈಡ್‌ ಎಂಬ ಸುರಕ್ಷಿತ ರಾಸಾಯನಿಕ ಬಳಸುವಂತೆ ಅವರು ಸೂಚಿಸಿದರು.

ತೋಟಗಾರಿಕಾ ವಿಜ್ಞಾನಿ ಡಾ.ವೆಂಕಟರಾವ್, ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಅಬೀಬಾ ನಿಶಾದ್, ದಿನೇಶ್‌ಕುಮಾರ್, ಎಪಿಎಂಸಿ ಕಾರ್ಯದರ್ಶಿ ಗಿರೀಶ್ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.