ADVERTISEMENT

ಜೋಡಿ ಕೊಲೆ ಆರೋಪಿ ಮುನಿಯಪ್ಪ ಬಂಧನ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 13:19 IST
Last Updated 14 ಸೆಪ್ಟೆಂಬರ್ 2020, 13:19 IST
ಮುನಿಯಪ್ಪ
ಮುನಿಯಪ್ಪ   

ಹುಣಸೂರು: ಜೋಡಿ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ವ್ಯಕ್ತಿಯನ್ನು ಪಿರಿಯಾಪಟ್ಟಣದಲ್ಲಿ ಮೊಬೈಲ್‌ ಕರೆ ಆಧರಿಸಿ ಬಂಧಿಸಲಾಗಿದೆ ಎಂದು ಸರ್ಕಲ್ ಇನ್ ಸ್ಪೆಕ್ಟರ್ ಪೂವಯ್ಯ ತಿಳಿಸಿದರು.

ಘಟನೆ ವಿವರ: ಆ.28 ರಂದು ಹುಣಸೂರು ತಾಲ್ಲೂಕಿನ ಗೌಡನಕಟ್ಟೆ ಗ್ರಾಮದ ಸರ್ವೆ ನಂ 25ರ ದೇವೇಂದ್ರ ಎಂಬುವವರ ಹೊಲದಲ್ಲಿ ಅರೆಬೆಂದ ಸ್ಥಿತಿಯಲ್ಲಿ ಅವಷೇಶ ಪತ್ತೆಯಾಗಿತ್ತು. ಈ ಸಂಬಂಧ ತನಿಖೆ ಕೈಗೊಂಡು ವಿಚಾರಣೆ ಹಂತದಲ್ಲಿ ಸತ್ತ ವ್ಯಕ್ತಿಯೂ ಮಾನವ ಮಾನವ ಅಲಿಯಾಸ್ ರಾಜಪ್ಪ (38) ಎಂದು ತಿಳಿದುಬಂದಿತ್ತು.

ಈ ಘಟನೆಯಲ್ಲಿ ಮುನಿಯಪ್ಪ ಮತ್ತು ರಾಜು ಎಂಬ ಸಹೋದರರು ಮುಖ್ಯ ಆರೋಪಿಯಾಗಿದ್ದು, ಇವರು ದೇವಸ್ಥಾನಗಳಲ್ಲಿ ಹುಂಡಿ ಒಡೆದು ಹಣ ಕಳ್ಳತನ ಮಾಡುವುದು ವೃತ್ತಿಯಾಗಿತ್ತು. ಗೌಡನಕಟ್ಟೆ ಘಟನೆಯಲ್ಲಿ ಮನಸ್ತಾಪ ಎದುರಾದ ಬಳಿಕ ಮಾನವನನ್ನು ಕೊಲೆ ಮಾಡಿ ಸುಟ್ಟು ಹಾಕಿದ್ದರು.

ADVERTISEMENT

ಮತ್ತೊಂದು ಕೊಲೆ: ಆರೋಪಿ ಸಹೋದರರಾದ ಮುನಿಯಪ್ಪ ಮತ್ತು ರಾಜು ಇಬ್ಬರು ಕಾಲ್ನಡಿಗೆಯಲ್ಲಿ ವಿವಿಧ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದರು. ಆರೋಪಿ ಸ್ವಂತ ಮೊಬೈಲ್ ಇಲ್ಲದ ಕಾರಣ, ತನ್ನ ಸಂಬಂಧಿಕರಿಗೆ ದಾರಿಹೋಕರ ಫೋನ್ ಮೂಲಕ ಕರೆ ಮಾಡುತ್ತಿದ್ದ. ಈ ಮಧ್ಯೆ ಆರೋಪಿ ಮುನಿಯಪ್ಪ ತನ್ನ ಚಿಕ್ಕಪ್ಪನ ಮಗಳು ಪೂಜಾಳಿಗೆ ದೂರವಾಣಿ ಕರೆ ಮಾಡಿದ ಖಚಿತ ಮಾಹಿತಿ ಆಧರಿಸಿ, ವಿಚಾರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದರು.

ಕಾರ್ಯಾಚರಣೆಯಲ್ಲಿ ಪ್ರಭಾಕರ್, ಬೀರೇಗೌಡ, ಗಣೇಶ್, ಮಂಜುನಾಥ್, ಮಜಾಜ್, ಶಿವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.