ADVERTISEMENT

ಮೈಸೂರು: ಜಿಟಿಜಿಟಿ ಮಳೆಯಲ್ಲಿ ಮಕ್ಕಳಿಗೆ ಆತ್ಮೀಯ ಸ್ವಾಗತ

​ಪ್ರಜಾವಾಣಿ ವಾರ್ತೆ
Published 16 ಮೇ 2022, 5:44 IST
Last Updated 16 ಮೇ 2022, 5:44 IST
   

ಮೈಸೂರು: ಶಾಲೆಗಳು ಪುನರಾರಂಭವಾಗಿದ್ದು, ಜಿಟಿಜಿಟಿ ಮಳೆಯಲ್ಲಿ ಚಿಣ್ಣರು ಶಾಲೆಯತ್ತ ಧಾವಿಸಿದರು.

ಬಹುತೇಕ ಕಡೆ ಶಾಲಾ ಹಾಗೂ ಆವರಣವನ್ನು ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರು ಮಕ್ಕಳಿಗೆ ಗುಲಾಬಿ ಹೂವು ಹಾಗೂ ಸಿಹಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಅಪೂರ್ವ ಸ್ನೇಹ ಬಳಗವು ಮೈಸೂರು ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ‌ ನೀಡಿತು. ಶಿಕ್ಷಕರು ಆರತಿ ಬೆಳಗಿ ವಿಶೇಷವಾಗಿ ಸ್ವಾಗತಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.