ADVERTISEMENT

ಮೈಸೂರು | ನೀರಿನಲ್ಲಿ ಮುಳುಗಿ ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಸಾವು

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 22:52 IST
Last Updated 20 ಜುಲೈ 2025, 22:52 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಮೈಸೂರು: ತಾಲ್ಲೂಕಿನ ಮೀನಾಕ್ಷಿಪುರದ ಬಳಿ ಕೃಷ್ಣರಾಜಸಾಗರ (ಕೆಆರ್‌ಎಸ್‌) ಹಿನ್ನೀರಿಗೆ ಇಳಿದಿದ್ದ ಮಂಡ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಮಿಮ್ಸ್) ಮೂವರು ನರ್ಸಿಂಗ್‌ ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟರು.

ADVERTISEMENT

ಹಾವೇರಿಯ ಕೃಷ್ಣ (21), ಪಿರಿಯಾಪಟ್ಟಣ ತಾಲ್ಲೂಕು ಅನಿವಾಳು ಗ್ರಾಮದ ಪ್ರಶಾಂತ್‌ (21) ಹಾಗೂ ಚಾಮರಾಜನಗರ ಜಿಲ್ಲೆ ಸಂತೇಮರಳ್ಳಿಯ ಸಿದ್ದೇಶ್‌ (22) ಮೃತರು. ಮೂವರೂ 2ನೇ ವರ್ಷದ ಬಿ.ಎಸ್ಸಿ ನರ್ಸಿಂಗ್‌ ವಿದ್ಯಾರ್ಥಿಗಳು ಎಂದು ಇಲವಾಲ ಠಾಣೆ ಪೊಲೀಸರು ತಿಳಿಸಿದ್ದಾರೆ.

‘ಮಧ್ಯಾಹ್ನ 1.30ರ ಸುಮಾರಿಗೆ ನೀರಿಗೆ ಇಳಿದಿದ್ದು, ಈಜು ಬಾರದೇ ಮುಳುಗಿದ್ದಾರೆ. ಮುಳುಗುತಜ್ಞರ ನೆರವಿನಿಂದ ಶವಗಳನ್ನು ತೆಗೆದು ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್.ಆಸ್ಪತ್ರೆಗೆ ಕಳುಹಿಸಲಾಗಿದೆ’ ಎಂದು ಹೇಳಿದ್ದಾರೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.