
ಮೈಸೂರು: ‘ನಾಯಕ ಸಮುದಾಯ ಸಂಘಟಿತವಾದರೆ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ’ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು.
ಇಲ್ಲಿನ ಮಹರ್ಷಿ ವಾಲ್ಮೀಕಿ ಪ್ರಬುದ್ಧ ವೇದಿಕೆ ವತಿಯಿಂದ ಪೈಲ್ವಾನ್ ಚಿಕ್ಕಬಸವಯ್ಯ ಫಂಕ್ಷನ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ 2026ನೇ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
‘ಮೂವತ್ತು ವರ್ಷದಿಂದ ಮೈಸೂರು ಭಾಗದಲ್ಲಿ ನಾಯಕ ಸಮುದಾಯ ಹತ್ತು ಹಲವು ಸಮಸ್ಯೆ ಎದುರಿಸುತ್ತಾ ಬರುತ್ತಿದೆ. ಪರಿವಾರ ಇತ್ತೀಚಿಗೆ ಎಸ್ಟಿಗೆ ಸೇರಿದ್ದು, ಆ ಸಮುದಾಯಕ್ಕೆ ದೊರೆತ ನ್ಯಾಯವಾಗಿದೆ. ರಾಜಕೀಯವಾಗಿ ಸಮುದಾಯ ಇನ್ನೂ ಮುಂದೆ ಬರಬೇಕಿದೆ’ ಎಂದರು.
ಮುಖಂಡ ಅಪ್ಪಣ್ಣ ನಾಯಕ ಮಾತನಾಡಿ, ‘ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದೆ. ಉನ್ನತ ಶಿಕ್ಷಣ ತರಬೇತಿ ಕೇಂದ್ರ ತೆರೆಯಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳ ಕಾರ್ಯಾಗಾರ ನಡೆಯಬೇಕು. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ಎಕರೆ ಜಾಗವನ್ನು ನೀಡಿದ್ದಾರೆ. ಆದರೆ, ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣ ರಾಜಕೀಯವಾಗಿ ಬೆಳೆಯಲು ಕಷ್ಟವಾಗುತ್ತಿದೆ’ ಎಂದರು.
ತೆರಿಗೆ ಇಲಾಖೆ ಉಪ ಆಯುಕ್ತ ಮಂಜುನಾಥ್, ಉದ್ಯಮಿ ನಿಂಗರಾಜ ಎನ್. ಬೆಳತ್ತೂರು, ರಾಜ್ಯ ಎಸ್ಸಿ, ಎಸ್ಟಿ ಉದ್ಯಮ ಕ್ಷೇತ್ರದ ಅಧ್ಯಕ್ಷ ಮಂಜುನಾಥ್, ಅಧ್ಯಕ್ಷತೆ ವಹಿಸಿದ್ದ ನಿಂಗರಾಜು ಧನಗನಹಳ್ಳಿ ಮಾತನಾಡಿದರು.
ಸಮಾಜದ ಮುಖಂಡರಾದ ಗುಂಡ್ಲುಪೇಟೆ ಮಲ್ಲೇಶ್, ಶೋಭಾ ಮೋಹನ್, ಲೋಕೇಶ್, ಕಡಕೋಳ ಮಾದೇಶ, ನಟರಾಜು, ಮಲ್ಲೇಶ್, ಸಾಹುಕಾರಹುಂಡಿ ಮಹದೇವ ಇದ್ದರು.
ರಂಗನಾಥ ನಿರೂಪಿಸಿದರು. ನಂಜುಂಡಸ್ವಾಮಿ ಸ್ವಾಗತಿಸಿದರು. ಪುಟ್ಟರಾಜು ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.