ಮೈಸೂರು: ‘ಇಲ್ಲಿನ ರಂಗಾಯಣದಲ್ಲಿ ನ.20ರಿಂದ ‘ಟಿಪ್ಪು ನಿಜಕನಸುಗಳು’ ನಾಟಕ ಪ್ರದರ್ಶನ ಕಾಣಲಿದೆ. ಪ್ರೇಕ್ಷಕರು ಟಿಕೆಟ್ ಪಡೆದು ಬರುವುದರಿಂದಾಗಿ ಯಾವುದೇ ಫೋಟೊ ತೆಗೆಯುವುದು ಹಾಗೂ ವಿಡಿಯೊ ಮಾಡುವುದನ್ನು ನಿಷೇಧಿಸಲಾಗಿದೆ’ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.
‘ಅಂದು ಸಂಜೆ 6ಕ್ಕೆ ಪ್ರದರ್ಶನ ಆರಂಭಗೊಳ್ಳಲಿದೆ. ನಾಟಕಕ್ಕೆ ಮುನ್ನ ಯಾವುದೇ ಸಭೆ–ಸಮಾರಂಭ ಇರುವುದಿಲ್ಲ. ಮಾಧ್ಯಮಕ್ಕೆ ಫೋಟೊಗಳನ್ನು ನಂತರ ಬಿಡುಗಡೆ ಮಾಡಲಾಗುವುದು’ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.