ADVERTISEMENT

‘ಬದ್ಧತೆ ಗಮನಿಸಿ, ಕಾಂಗ್ರೆಸ್‌ ಗೆಲ್ಲಿಸಿ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2024, 16:20 IST
Last Updated 24 ಏಪ್ರಿಲ್ 2024, 16:20 IST

ಮೈಸೂರು: ‘ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಯುವಜನರು, ವಿದ್ಯಾವಂತರನ್ನು ಹೆಚ್ಚು ಕಣಕ್ಕಿಳಿಸಿದ್ದು, ಇದರ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಚ್ಛ, ನಿಷ್ಕಳಂಕ ವ್ಯಕ್ತಿತ್ವದ ಪ್ರಭಾವವಿದೆ. ಈ ಎಲ್ಲರನ್ನು ಗೆಲ್ಲಿಸುವುದು ಪ್ರಜಾಪ್ರಭುತ್ವದ ಉಳಿವಿಗೆ ಅಗತ್ಯ’ ಎಂದು ತಾಲ್ಲೂಕು ಕನಕ ಯುವ ಸಮಿತಿಯ ರಾಯನಹುಂಡಿ ಆರ್. ಶಶಿಕುಮಾ‌ರ್ ಹಾಗೂ ವರಕೂಡು ದೊಡ್ಡಗೌಡ ಮನವಿ ಮಾಡಿದ್ದಾರೆ.

‘ಸಾಹಿತಿ, ಬುದ್ಧಿಜೀವಿಗಳ ಒಡನಾಟದಲ್ಲಿ ಬೆಳೆದು ಬಂದ ಸಿದ್ದರಾಮಯ್ಯ, ಮೊದಲು ಮುಖ್ಯಮಂತ್ರಿಯಾದಾಗ ಬಡವರಿಗೆ ಭಾಗ್ಯಗಳನ್ನು ಕೊಟ್ಟರು. ಎರಡನೇ ಬಾರಿ ಗ್ಯಾರಂಟಿಗಳನ್ನು ಜಾರಿಗೊಳಿಸಿ ‘ಮಾತು ತಪ್ಪದ ಮುಖ್ಯಮಂತ್ರಿ’ ಎಂದು ನಿರೂಪಿಸಿದರು. ಯಾವುದೇ ಅಭ್ಯರ್ಥಿಗೆ ಮತ ಹಾಕುವ ಮೊದಲು ಅವರ ಹಿಂದಿರುವ ಶಕ್ತಿಯನ್ನು, ಬದ್ಧತೆಯ ವ್ಯಕ್ತಿತ್ವವನ್ನು ಗಮನಿಸಬೇಕು. ನಾಡಿನ ಒಳಿತಿಗಾಗಿ ಎಲ್ಲರೂ ಕಾಂಗ್ರೆಸ್ ಪಕ್ಷ ಬೆಂಬಲಿಸಿ’ ಎಂದು ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT