ADVERTISEMENT

ಪ್ರಜಾವಾಣಿ: ಮೈಸೂರು ಬ್ಯುರೋ ಜಾಹೀರಾತು ವಿಭಾಗದ ವ್ಯವಸ್ಥಾಪಕ ರಂಗಸ್ವಾಮಿ ನಿಧನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 16:23 IST
Last Updated 19 ಡಿಸೆಂಬರ್ 2020, 16:23 IST
ರಂಗಸ್ವಾಮಿ
ರಂಗಸ್ವಾಮಿ   

ಮೈಸೂರು: ‘ಪ್ರಜಾವಾಣಿ’ಯ ಮೈಸೂರು ಬ್ಯುರೋದ ಜಾಹೀರಾತು ವಿಭಾಗದ ವ್ಯವಸ್ಥಾಪಕ ಆರ್‌.ರಾಜೀವ್‌ ಅವರ ತಂದೆ ರಂಗಸ್ವಾಮಿ (74) ಶನಿವಾರ ನಿಧನರಾದರು.

ಮೈಸೂರಿನ ಬೋಗಾದಿಯ ರೈಲ್ವೆ ಲೇಔಟ್‌ನ ಶಾರದಾ ನಗರದ ನಿವಾಸಿಯಾಗಿದ್ದ ರಂಗಸ್ವಾಮಿ ಅವರಿಗೆ ರಾಜೀವ್‌ ಸೇರಿದಂತೆ ಮೂವರು ಪುತ್ರರು, ಪತ್ನಿ ಇದ್ದಾರೆ.

ರಂಗಸ್ವಾಮಿ ಪೊಲೀಸ್ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದರು. ಭಾನುವಾರ ಬೆಳಿಗ್ಗೆ 11.30ಕ್ಕೆ ಚಾಮರಾಜನಗರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.