ADVERTISEMENT

ಮೈಸೂರು: ಹೊಲಿಗೆ ಕೌಶಲದ ಮೂಲಕ ಕಾಂಗ್ರೆಸ್‌ ಮುಖಂಡನ ಭಾವಚಿತ್ರ ಮೂಡಿಸಿ ಅಭಿಮಾನ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2022, 12:32 IST
Last Updated 25 ಆಗಸ್ಟ್ 2022, 12:32 IST
   

ಮೈಸೂರು: ಇಲ್ಲಿನ ಟೇಲರ್‌ ರವಿನಾಯಕ್ ಅವರು ಹೊಲಿಗೆ ಕೌಶಲದ ಮೂಲಕ ಕಾಂಗ್ರೆಸ್‌ ಮುಖಂಡ ಎಂ.ಕೆ.ಸೋಮಶೇಖರ್ ಭಾವಚಿತ್ರವನ್ನು ಮೂಡಿಸಿ ಅಭಿಮಾನ ಮೆರೆದಿದ್ದಾರೆ.

ಕೆ.ಆರ್‌.ಮೊಹಲ್ಲಾದ ಭಾವಸಾರ್‌ ಕ್ಷತೀಯ ಸೇವಾ ಸಮಿತಿಯು ರವಿನಾಯಕ್ ಅವರು ಹೊಲಿದ ಭಾವಚಿತ್ರವನ್ನು ಉಡುಗೊರೆಯಾಗಿ ಮುಖಂಡ ಸೋಮಶೇಖರ್‌ ಅವರಿಗೆ ಗುರುವಾರ ನೀಡಿದೆ.

‘ಸೋಮಶೇಖರ್‌ ಅವರ ಕಾರ್ಯವೈಖರಿ, ಸೇವಾ ಮನೋಭಾವ, ಸರಳತೆಗೆ ಮನಸೋತಿದ್ದೇನೆ. ಬಟ್ಟೆಯಲ್ಲಿ ನನ್ನ ಹೊಲಿಗೆ ಯಂತ್ರದ ಮೂಲಕ ನೂಲಿನ ಚಿತ್ರ ಬರೆದಿದ್ದೇನೆ’ ಎಂದು ರವಿನಾಯಕ್‌ ಹೇಳಿದರು.

ADVERTISEMENT

ಅಭಿಮಾನಿಯ ಉಡುಗೊರೆ ಸ್ವೀಕರಿಸಿದ ಸೋಮಶೇಖರ್‌ ಧನ್ಯವಾದಗಳನ್ನು ಸಲ್ಲಿಸಿದರು. ಈ ಸಂದರ್ಭ ಮುಖಂಡರಾದ ಚಂದ್ರಶೇಖರ್ ಪತಂಗೆ, ಶಾಂತರಾಮ್ ಸಿಂಟ್ರೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.