ಮೈಸೂರು: ವರ್ತುಲ ರಸ್ತೆಯಲ್ಲಿ ಎರಡು ದಿನಗಳ ಹಿಂದೆಯಷ್ಟೇ ಅಳವಡಿಸಲಾಗಿರುವ ಎಲ್ಇಡಿ ವಿದ್ಯುತ್ ದೀಪಗಳ ವ್ಯವಸ್ಥೆಗೆ ಕಳ್ಳರ ಕಾಟ ಶುರುವಾಗಿದೆ.
ಸಾತಗಳ್ಳಿ ಬಳಿ ಕಳ್ಳರು, ಕಂಬದಲ್ಲಿನ ಎಂಸಿಬಿ ಸ್ವಿಚ್ಸ್ ಕದ್ದಿದ್ದಾರೆ. ವಿದ್ಯುತ್ ಸಂಪರ್ಕ ತೆಗೆಯುವುದು ನಡೆಯುತ್ತಿದೆ. ಹಿಂದೆಯೂ ಪ್ರಾಯೋಗಿಕವಾಗಿ ವಿದ್ಯುದ್ದೀಪಗಳನ್ನು ಅಳವಡಿಸಿದ್ದಾಗಲೂ ಕಳ್ಳರ ಕಾಟ ಕಂಡುಬಂದಿತ್ತು. ಈಗಲೂ ಮರುಳಿಸುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಪ್ರತಾಪ ಸಿಂಹ, ‘ವರ್ತುಲ ರಸ್ತೆಯಲ್ಲಿ ಕಳ್ಳರ ಕಾಟ ತಡೆಯಬೇಕಾಗಿದೆ. ಇದಕ್ಕಾಗಿ ರಾತ್ರಿ ಗಸ್ತು ಆರಂಭಿಸುತ್ತಿದ್ದೇನೆ. ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳ ನಿಗಾ ವಹಿಸುವುದಕ್ಕೆ ಯೋಜಿಸಲಾಗಿದೆ. ಇದಕ್ಕಾಗಿ ಇಂಡಿಯನ್ ಬ್ಯಾಂಕ್ನಿಂದ ₹ 5 ಲಕ್ಷ ಆರ್ಥಿಕ ನೆರವಿನ ಡಿಡಿಯನ್ನು ಕೊಡಿಸಿದ್ದೇನೆ’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.