ADVERTISEMENT

ಮನೆಯ ಹಿತ್ತಲಿನಲ್ಲಿದ್ದ ಶ್ರೀಗಂಧದ ತುಂಡು ಕಳವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 12:53 IST
Last Updated 30 ಜುಲೈ 2023, 12:53 IST
ಹುಣಸೂರು ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಮನೆಯಲ್ಲಿ ಬೆಳೆದಿದ್ದ 16 ವರ್ಷದ ಶ್ರೀಗಂಧದ ಮರ ಕತ್ತರಿಸಲಾಗಿರುವುದು
ಹುಣಸೂರು ತಾಲ್ಲೂಕಿನ ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ಮನೆಯಲ್ಲಿ ಬೆಳೆದಿದ್ದ 16 ವರ್ಷದ ಶ್ರೀಗಂಧದ ಮರ ಕತ್ತರಿಸಲಾಗಿರುವುದು   

ಹುಣಸೂರು: ನಾಗಾಪುರ ಗಿರಿಜನ ಪುನರ್ವಸತಿ ಕೇಂದ್ರದ ವೀಣಾ ಎಂ.ಬಿ.ಪ್ರಭು ಅವರ ಮನೆಯ ಹಿತ್ತಲಿನಲ್ಲಿ ಬೆಳೆದಿದ್ದ ಶ್ರೀಗಂಧ ಕಳ್ಳತನವಾಗಿದೆ.

ಒಂದು ವಾರದ ಹಿಂದೆ ಮನೆಯ ಹಿತ್ತಲಿನಲ್ಲಿ ಬೆಳೆಸಿದ್ದ ಶ್ರೀಗಂಧದ ಮರ ಕಳವು ಮಾಡಲು ಕಳ್ಳರು ಬಂದಿದ್ದು, ಮರ ಕಡಿಯುವ ಶಬ್ದಕ್ಕೆ ಎಚ್ಚರಗೊಂಡು ಮನೆಯವರು ಕೂಗು ಹಾಕುತ್ತಿದ್ದಂತೆ ಮರ ಸ್ಥಳದಲ್ಲೇ ಬಿಟ್ಟು ಓಡಿಹೋಗಿದ್ದರು.

‘ಈ ಸಂಬಂಧ ಹುಣಸೂರು ಸಾಮಾಜಿಕ ಅರಣ್ಯ ಇಲಾಖೆ ಕಚೇರಿಗೆ ಲಿಖಿತ ದೂರು ನೀಡಿ, ಶ್ರೀಗಂಧದ ಮರ ಕಳ್ಳರು ಕತ್ತರಿಸಿದ್ದು, ಸಂರಕ್ಷಿಸಿ ಮನೆಯಲ್ಲಿ ಇಡಲಾಗಿದೆ. ಇಲಾಖೆ ಅಧೀನಕ್ಕೆ ಪಡೆಯುವಂತೆ ಕೋರಿ ಅರ್ಜಿ ಸಲ್ಲಿಸಿದ್ದೆವು. ಇಲಾಖೆ ಸಕಾಲಕ್ಕೆ ಬಾರದ ಕಾರಣ ಮರದ ದಿಮ್ಮಿಯನ್ನು ಮನೆಯಲ್ಲಿ ಇಟ್ಟಿದ್ದು, ಜು.27ರಂದು ಅಪರಿಚಿತರು ಮನೆಯಲ್ಲಿನ ಶ್ರೀಗಂಧದ ತುಂಡನ್ನು ಅಪಹರಿಸಲು ಯತ್ನಿಸಿದ್ದಾರೆ. ಈ ಸಮಯದಲ್ಲಿ ಅವರನ್ನು ತಡೆಯಲು ಪ್ರಯತ್ನಿಸಿದಾಗ ಮಾರಕಾಸ್ತ್ರಗಳಿಂದ ಥಳಿಸಿದ್ದಾರೆ’ ಎಂದು ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.