ಮೈಸೂರು: ನಾಗರಹೊಳೆಯ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿ ಹುಲ್ಲುಮಟ್ಲು ಹಾಡಿಯ ಚಿನ್ನಪ್ಪ ಎಂಬ ವ್ಯಕ್ತಿ ಚಳಿಗೆಕಾಯಿಸಲು ಹೋದಾಗ ಹುಲಿಯೊಂದು ಕೊಂದು ಹಾಕಿದೆ.
ಗರಿಗಳನ್ನು ಒಟ್ಟುಗೂಡಿಸಿ ಬೆಂಕಿ ಹೊತ್ತಿಸಬೇಕು ಎನ್ನುವಷ್ಟರಲ್ಲಿ ಹುಲಿ ದಾಳಿ ನಡೆಸಿದೆ. ಈ ವೇಳೆ ಮೇಕೆಯೊಂದನ್ನೂ ಹುಲಿ ಕೊಂದಿದೆ. ಚಿನ್ನಪ್ಪ ಅವರ ಕುತ್ತಿಗೆ ಭಾಗವನ್ನು ಹುಲಿ ಕಚ್ಚಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.