ADVERTISEMENT

ಧರೆಗುರುಳಿದ ಕೊಂಬೆ; ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2020, 10:01 IST
Last Updated 7 ಫೆಬ್ರುವರಿ 2020, 10:01 IST
ಕುಕ್ಕರಹಳ್ಳಿ ಸಮೀಪದ ರಸ್ತೆಗೆ ಮರವೊಂದರ ಬೃಹತ್ ಗಾತ್ರದ ಕೊಂಬೆ ಗುರುವಾರ ಸಂಜೆ ಮುರಿದು ಬಿದ್ದಿತು. ಪಾಲಿಕೆ ರಕ್ಷಣಾ ತಂಡ ‘ಅಭಯ್‌’ನ ಕಾರ್ಯಕರ್ತರು ತೆರವುಗೊಳಿಸಿದರು
ಕುಕ್ಕರಹಳ್ಳಿ ಸಮೀಪದ ರಸ್ತೆಗೆ ಮರವೊಂದರ ಬೃಹತ್ ಗಾತ್ರದ ಕೊಂಬೆ ಗುರುವಾರ ಸಂಜೆ ಮುರಿದು ಬಿದ್ದಿತು. ಪಾಲಿಕೆ ರಕ್ಷಣಾ ತಂಡ ‘ಅಭಯ್‌’ನ ಕಾರ್ಯಕರ್ತರು ತೆರವುಗೊಳಿಸಿದರು   

ಮೈಸೂರು: ಇಲ್ಲಿನ ಕುಕ್ಕರಹಳ್ಳಿ ಸಮೀಪದ ರಸ್ತೆಗೆ ಮರವೊಂದರ ಬೃಹತ್ ಗಾತ್ರದ ಕೊಂಬೆ ಗುರುವಾರ ಸಂಜೆ ಮುರಿದು ಬಿದ್ದಿತು. ಕೂದಲೆಳೆ ಅಂತರದಲ್ಲಿ ವಾಹನ ಸವಾರರು ಪಾರಾದರು.

ಇದರಿಂದ ಸುತ್ತಮುತ್ತಲ ರಸ್ತೆಗಳಲ್ಲಿ ರಾತ್ರಿ ಇಡಿ ಸಂಚಾರ ಬಂದ್ ಆಯಿತು. ಬೃಹತ್ ಗಾತ್ರದ ಕೊಂಬೆಗಳನ್ನು ಪಾಲಿಕೆಯ ರಕ್ಷಣಾ ತಂಡ ‘ಅಭಯ್’ನ ಮೂರೂ ತಂಡಗಳು ಬಂದು ತೆರವುಗೊಳಿಸಿತು. ಒಟ್ಟು 20ಕ್ಕೂ ಅಧಿಕ ಮಂದಿ ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪಾಲಿಕೆಯ ತೋಟಗಾರಿಕಾ ವಿಭಾಗದ ಸಹಾಯಕ ನಿರ್ದೇಶಕ ಮಣಿಕಂಠ , ‘ಇದೊಂದು ದೊಡ್ಡ ಗಾತ್ರದ ಛತ್ರಿಮರ. ಮೈಸೂರು ವಿ.ವಿ ವ್ಯಾಪ್ತಿಗೆ ಸೇರಿದ ಕೆರೆ ಆವರಣದಿಂದ ರಸ್ತೆಯ ಕಡೆ ಚಾಚಿಕೊಂಡಿದ್ದ ಬೃಹತ್ ಗಾತ್ರದ ಕೊಂಬೆ ಮುರಿದಿದೆ. ಇದು ಮುರಿದು ಬೀಳುವ ಕ್ಷಣದಲ್ಲಿ ರಸ್ತೆಯಲ್ಲಿ ಯಾರೂ ಇಲ್ಲದ್ದರಿಂದ ಅಪಾಯ ತಪ್ಪಿದೆ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.