ADVERTISEMENT

ಮಂಡ್ಯದಲ್ಲಿ ಸುಮಲತಾರನ್ನೇ ಗೆಲ್ಲಿಸಿ: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 13:51 IST
Last Updated 9 ಏಪ್ರಿಲ್ 2019, 13:51 IST
   

ಮೈಸೂರು: ‘ಈ ಬಾರಿ ಮಂಡ್ಯದಿಂದ ಸುಮಲತಾ ಅವರನ್ನೇ ಗೆಲ್ಲಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಸುಮಲತಾ ಪರ ಮತ ಯಾಚಿಸಿದರು.

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸಂಕಲ್ಪನಾ ರ್‍ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸುಮಲತಾ ಬಿಜೆಪಿಗೆ ಸೇರುತ್ತಾರೆ ಎನ್ನುವ ಮಾತುಗಳು ಚುನಾವಣಾ ರಂಗದಲ್ಲಿ ಗರಿಗೆದರುತ್ತಿರುವ ನಡುವೆಯೇಮೋದಿ, ಅವರ ಪರ ಪ್ರಚಾರ ನಡೆಸಿದ್ದು ಆ ಮಾತುಗಳಿಗೆ ಮತ್ತಷ್ಟು ಇಂಬು ನೀಡಿದಂತಾಗಿದೆ.

ADVERTISEMENT

ಮೋದಿ ಅವರು ಮೈಸೂರಿನ ರ್‍ಯಾಲಿ ಉದ್ದೇಶಿಸಿ ಮಾತನಾಡುವಾಗಅಂಬರೀಷ್ ಹೆಸರು ಪ್ರಸ್ತಾಪಿಸುವುದನ್ನುಮರೆಯಲಿಲ್ಲ. ಅಂಬರೀಷ್‌ ಅವರ ಹೆಸರು ಹೇಳುತ್ತಿದ್ದಂತೆ ಮೈದಾನದಲ್ಲಿ ಸೇರಿದ್ದ ಜನರು ‘ಓ’ ಎಂದು ಕೂಗಿ ಸಂತಸ ವ್ಯಕ್ತಪಡಿಸಿದರು.

‘ಮೈಸೂರಿನ ಮತ್ತು ಕರ್ನಾಟಕದ ಅಭಿವೃದ್ದಿಗೆ ಅಂಬರೀಷ್ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಮಾಡಿದ ಒಳ್ಳೆಯ ಕೆಲಸಗಳನ್ನುಮುಂದುವರಿಸಿಕೊಂಡು ಹೋಗಲು ಸುಮಲತಾ ಅವರನ್ನು ಬೆಂಬಲಿಸಿ, ಗೆಲ್ಲಿಸಿ’ ಎಂದು ಮೋದಿ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.