ಮೈಸೂರು:‘ಇನ್ನೂ ಎರಡು ವರ್ಷ ಜೆಡಿಎಸ್ ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ಜೆಡಿಎಸ್ ಶಾಸಕನಾಗಿಯೇ ಕೆಲಸ ಮಾಡುತ್ತೇನೆ’ ಎಂದು ಶಾಸಕ ಜಿ.ಟಿ.ದೇವೇಗೌಡ ಸೋಮವಾರ ಇಲ್ಲಿ ತಿಳಿಸಿದರು.
‘ಮುಂದಿನ ವಿಧಾನಸಭೆ ಚುನಾವಣೆವೇಳೆಗೆಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಯಾವಸ್ವರೂಪದಲ್ಲಿಇರಲಿವೆ ಎಂಬುದನ್ನು ನೋಡಿ ತೀರ್ಮಾನ ಕೈಗೊಳ್ಳುತ್ತೇನೆ. ಕ್ಷೇತ್ರದ ಅಭಿವೃದ್ಧಿ ಗಮನದಲ್ಲಿಟ್ಟುಕೊಂಡುನಿರ್ಧಾರ ಮಾಡುತ್ತೇನೆ. ಈಗ ಯಾವುದೇ ತೀರ್ಮಾನ ಕೈಗೊಳ್ಳಲ್ಲ’ ಎಂದರು.
‘ರಾಜ್ಯ, ರಾಷ್ಟ್ರ ಮಟ್ಟದ ರಾಜ ಕೀಯದಲ್ಲಿ ರಾಜಕಾರಣ ಮಾಡಿ. ಆದರೆ, ದಯವಿಟ್ಟು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ 3 ಪಕ್ಷಗಳು ರಾಜಕೀಯ ಮಾಡ ಬಾರದು.ಉತ್ತಮವಾಗಿ ಸೇವೆ ಸಲ್ಲಿಸುವವರನ್ನು ಜನರೇಆಯ್ಕೆ ಮಾಡಿ ಕೊಳ್ಳುತ್ತಾರೆ’ ಎಂದು ನುಡಿದರು.
‘ಬಿಜೆಪಿಯವರು ಪಂಚಾಯಿತಿಯಿಂದ ರಾಷ್ಟ್ರಮಟ್ಟದವರೆಗೆ ರಾಜಕಾರಣ ಎನ್ನುತ್ತಿದ್ದಾರೆ. ಕಾಂಗ್ರೆಸ್ನವರು ಈಗಾ ಗಲೇ ಪ್ರಚಾರ ಕೈಗೊಂಡಿರು ವುದಾಗಿ ಹೇಳಿದ್ದಾರೆ. ಜೆಡಿಎಸ್ನವರೂ ಇದೇ ರೀತಿ ಮಾಡುತ್ತಿದ್ದಾರೆ’ ಎಂದರು.
‘ಯಾರು ಪಿಂಚಣಿ ಮಾಡಿಸಿಕೊ ಡುತ್ತಾರೆ, ಯಾರು ಗ್ರಾಮದಲ್ಲಿ ವಿದ್ಯುತ್ ಬಲ್ಬು ಹಾಕಿಸಿಕೊಡುತ್ತಾರೆ, ಯಾರು ಸ್ವಚ್ಛತೆ ಕಾರ್ಯ ಕೈಗೊಳ್ಳುತ್ತಾರೆ, ಕಷ್ಟಕ್ಕೆ ಯಾರು ಸ್ಪಂದಿಸುತ್ತಾರೆ ಅಂಥವರನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಚುನಾವಣೆಯಲ್ಲಿ ಯಾವುದೇ ಚಿಹ್ನೆ ಇರುವುದಿಲ್ಲ. ಹೀಗಾಗಿ, ಪಕ್ಷಾತೀತವಾಗಿ ನಡೆಯಬೇಕು. ದಯವಿಟ್ಟು ಪಕ್ಷವನ್ನು ಇಲ್ಲಿಗೆ ತರದೇ ಜನರ ನಿರ್ಧಾರಕ್ಕೆ ಬಿಡಿ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.